ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಭಾರತ ಸರ್ಕಾರದ ಕಾರ್ಯದರ್ಶಿಯನ್ನಾಗಿ ನೇಮಿಸಿ ನವದೆಹಲಿಗೆ ವರ್ಗಾಯಿಸಲಾಗಿದೆ.
2013 ಆಗಸ್ಟ್ 10 ರಂದು ಬಿಎಂಆರ್ ಸಿಎಲ್ ಎಂಡಿ ಯಾಗಿ ನೇಮಕಗೊಂಡಿದ್ದರು. ಮೆಟ್ರೋ ಒಳಸುರಂಗ ಮಾರ್ಗ ನಿರ್ಮಾಣದಂತಹ ನಿರ್ಣಾಯಕ ಅವಧಿ ಹಾಗೂ ಈಸ್ಟ್- ವೆಸ್ಟ್ ಕಾರಿಡಾರ್ ನಿರ್ಮಾಣದಲ್ಲಿ ಖರೋಲಾ ಉತ್ತಮ ಕಾರ್ಯ ನಿರ್ವಹಿಸಿದ್ದರು.
ಮುಂದಿನ ಜೂನ್ ತಿಂಗಳ ವೇಳೆಗೆ ಮೆಟ್ರೋ ಮೊದಲ ಹಂತ ಉದ್ಘಾಟನೆಯಾಗಲಿದ್ದು, ಅಲ್ಲಿಯವರೆಗೂ ಬಿಎಂಆರ್ ಸಿಎಲ್ ನಲ್ಲೇ ಮುಂದುವರಿಯಲು ಖರೋಲಾ ಬಯಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಈ ಸಂಬಂಧ ಪ್ರತಿಕ್ರಿಯಿಸಲು ಖರೋಲಾ ನಿರಾಕರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos