ಕೇವಲ 2.5 ಲಕ್ಷಕ್ಕೆ ಕ್ರೇನ್, ಖನನ ಸಾಧನ ತಯಾರಿಸಿದ ಲ್ಯಾಬ್ ತಂತ್ರಜ್ಞ! 
ರಾಜ್ಯ

ಕೇವಲ 2.5 ಲಕ್ಷಕ್ಕೆ ಕ್ರೇನ್, ಖನನ ಸಾಧನ ತಯಾರಿಸಿದ ಲ್ಯಾಬ್ ತಂತ್ರಜ್ಞ!

ವೃತ್ತಿಯಲ್ಲಿ ಲ್ಯಾಬ್ ತಂತ್ರಜ್ಞರಾಗಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೃಷಿಕ ಮನೆತನದ ಗಿರೀಶ್ ಬಸಪ್ಪ ದೊಡ್ಡಗೌಡರ್ ಕೇವಲ 2.5 ಲಕ್ಷಕ್ಕೆ ಕ್ರೇನ್, ಖನನ ಸಾಧನ ತಯಾರಿಸಿದ್ದಾರೆ.

ಬೆಳಗಾವಿ: ರೈತರು ಮನಸ್ಸು ಮಾಡಿದರೆ ಅದ್ಭುತ ಸಾಧನೆಗಳು ನಡೆಯುತ್ತವೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ವೃತ್ತಿಯಲ್ಲಿ ಲ್ಯಾಬ್ ತಂತ್ರಜ್ಞರಾಗಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೃಷಿಕ ಮನೆತನದ ಗಿರೀಶ್ ಬಸಪ್ಪ ದೊಡ್ಡಗೌಡರ್ ಕೇವಲ 2.5 ಲಕ್ಷಕ್ಕೆ ಕ್ರೇನ್, ಖನನ ಸಾಧನ ತಯಾರಿಸಿದ್ದಾರೆ. 
ಅಮ್ಮನಗಿ ಗ್ರಾಮದವರಾಗಿರುವ ಗಿರೀಶ್ ಬಸಪ್ಪ ತಾವು 2.5 ಲಕ್ಷಕ್ಕೆ ಕ್ರೇನ್ ಹಾಗೂ ಖನನ ಸಾಧನ ತಯಾರಿಸಲು ಕಾರಣವಾದ ಘಟನೆಯನ್ನು ಹೀಗೆ ವಿವರಿಸುತ್ತಾರೆ. "ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೇ ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಇದ್ದ ಒಂದೇ ಒಂದು ಪರಿಹಾರವೆಂದರೆ ಬಾವಿ ತೋಡಿಸುವುದು. ಆದರೆ ಆ ಕಾಮಗಾರಿಗೆ 7-8 ಲಕ್ಷ ಖರ್ಚಾಗುತ್ತಿತ್ತು. ಅಷ್ಟೊಂದು ಹಣ ಒಂದೇ ಬಾರಿಗೆ ಖರ್ಚು ಮಾಡಲು ಸಾಧ್ಯವಾಗದ ಕಾರಣ ಕೃಷಿ ಚಟುವಟಿಕೆ ಮತ್ತಷ್ಟು ಕಡಿಮೆಯಾಗಿತ್ತು. ಆಗಲೇ ನನಗೆ ಬಾವಿ ತೋಡಲು ನೆರವಾಗುವ ಕ್ರೇನ್ ಹಾಗೂ ಖನನ(ಅಗೆಯುವ) ಸಾಧನ ತಯಾರಿಸುವ ಆಲೋಚನೆ ಬಂದಿದ್ದು."  
" ಸ್ವಂತವಾಗಿ ಸಾಧನ ತಯಾರಿಸಲು ಚಿಂತನೆ ನಡೆಸಿ, ಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದೆ. ಕ್ರೇನ್ ಗೆ ಅಗತ್ಯವಿರುವ ಹೈಡ್ರಾಲಿಕ್ ಸಾಧನ ಸೇರಿದಂತೆ ಹಲವು ಸಾಧನಗಳನ್ನು ಖರೀದಿಸಿ ಕೇವಲ 2.5 ಲಕ್ಷದಲ್ಲಿ ಕ್ರೇನ್ ಹಾಗೂ ಖನನ ಸಾಧನವನ್ನು ತಯಾರಿಸಿದೆ" ಎಂದು ಗಿರೀಶ್ ಬಸಪ್ಪ ದೊಡ್ಡಗೌಡರ್ ಹೇಳಿದ್ದಾರೆ.  
ತಾವೇ ಖರೀದಿಸಿದ್ದ ಬಿಡಿ ಭಾಗಗಳಿಂದ ಕ್ರೇನ್ ಹಾಗೂ ಅರ್ತ್ ಮೋವರ್ ನ್ನು ಜೋಡಿಸಿ ಎರಡು ವರ್ಷಗಳಲ್ಲಿ ಈ ಸಾಧನಗಳನ್ನು ತಯಾರಿಸಿ ಬಾವಿ ತೋಡುವ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ. ಗಿರೀಶ್ ತಯಾರಿಸಿರುವ ಸಾಧನದಿಂದ ನೆಲ ಉಳುವ ಕೆಲಸವನ್ನೂ ಮಾಡಬಹುದಾಗಿದೆಯಂತೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT