ರಾಜ್ಯ

ಮೊಬೈಲ್ ನಲ್ಲಿ ಮಾತನಾಡುತ್ತಾ ಕೆಎಸ್ ಆರ್ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಶಾಲಾ ಬಸ್ ಚಾಲಕ: 6 ವರ್ಷದ ವಿದ್ಯಾರ್ಥಿ ಸಾವು

Shilpa D
ಬೆಂಗಳೂರು: ಶಾಲಾ ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಆರು ವರ್ಷದ ವಿದ್ಯಾರ್ಥಿ ಸಾವಿಗೀಡಾಗಿರುವ ದಾರುಣ ಘಟನೆ ಕನಕಪುರದ ದೊಡ್ಡ ಮರಳವಾಡಿಯಲ್ಲಿ ನಡೆದಿದೆ. 
ಗುರುವಾರ ಬೆಳಗ್ಗೆ ದೊಡ್ಡ ಮರಳವಾಡಿ ಬಳಿಯಲ್ಲಿ ಶಾಲಾ ಬಸ್ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ.ಪರಿಣಾಮ ಆರು ವರ್ಷದ ಚರಣ್ ಸಾವನ್ನಪ್ಪಿ ಮತ್ತಿಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಚಾಲಕ ದಾನಪ್ಪ ಎಂಬಾತ ಕೂಡ ಗಾಯಗೊಂಡಿದ್ದಾನೆ.
ಮರಳವಾಡಿಯ ಗಣೇಶ್ ಎಂಬುವರ ಪುತ್ರ ಚರಣ್ ಸೇರಿ 15 ಮಕ್ಕಳು ಆನ್ನಪೂರ್ಣೇಶ್ವರಿ ಗುರುಕುಲದ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆಯಿಂದ ಕಿಮೀ ದೂರದಲ್ಲಿ ಅಪಘಾತ ಸಂಭವಿಸಿದೆ,  ಗಾಯಗೊಂಡ ಮಕ್ಕಳನ್ನು ನಿಮ್ಹಾನ್ಸ್ ಸೇರಿದಂತೆ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಬೆಳಗ್ಗೆ 9,30ರ ವೇಳೆಗೆ ಅಪಘಾತ ಸಂಭವಿಸಿದ್ದು, ಹಾರೋಹಳ್ಳಿ ಕಡೆಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಶಾಲಾ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಕೆಎಸ್ ಆರ್ ಟಿಸಿ ಬಸ್ ನಲ್ಲಿ 30 ಪ್ರಯಾಣಿಕರಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ರಾಮನಗರ ಡಿವೈಎಸ್ ಪಿ ತಮ್ಮಯ್ಯ ಹೇಳಿದ್ದಾರೆ. 
SCROLL FOR NEXT