ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಅಶ್ರುವಾಯು ಶೆಲ್ ಸಿಡಿತ, ಕೆಲಹೊತ್ತು ಸಂಚಾರ ಅಸ್ತವ್ಯಸ್ತ

ನಗರದ ಸೇನಾ ಮೀಸಲು ಮೈದಾನದಲ್ಲಿ ಅವಧಿ ಮುಗಿದ ಅಶ್ರುವಾಯು ಶೆಲ್ ಗಳು ಸಿಡಿದು ....

ಬೆಂಗಳೂರು: ನಗರದ ಸೇನಾ ಮೀಸಲು ಮೈದಾನದಲ್ಲಿ ಅವಧಿ ಮುಗಿದ ಅಶ್ರುವಾಯು ಶೆಲ್ ಗಳು ಸಿಡಿದು ರಸ್ತೆಗೆ ಹರಿದು ಮೈಸೂರು ರಸ್ತೆಯಲ್ಲಿ ಪ್ರಯಾಣಿಕರು ಇಂದು ಬೆಳಗ್ಗೆ ತೊಂದರೆ ಅನುಭವಿಸುವಂತಾಯಿತು. ಇದರಿಂದ ಸೇನಾ ಮೀಸಲು ಮೈದಾನ ಮತ್ತು ಸಿರ್ಸಿ ಸರ್ಕಲ್ ಎದುರಿನ ರಸ್ತೆಯಲ್ಲಿ ಅವ್ಯವಸ್ಥೆ ಮತ್ತು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಇಂದು ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ಅಗ್ನಿಶಾಮಕ ಮತ್ತು ಸುರಕ್ಷ ಸೇವೆ ಸಿಬ್ಬಂದಿ ಹಾಗೂ ಕೇಂದ್ರ ಸೇನಾ ಮೀಸಲು ಪಡೆಯ ಸಿಬ್ಬಂದಿ ಕೆಲವು ಅವಧಿ ಮುಗಿದ ಅಶ್ರುವಾಯು ಶೆಲ್ ಗಳನ್ನು ನಾಶಪಡಿಸುತ್ತಿದ್ದರು. ಒಂದೇ ಸಲಕ್ಕೆ 12 ಶೆಲ್ ಗಳನ್ನು ನಾಶಪಡಿಸಲಾಯಿತು. ಇದರಿಂದ ಹೊರಬರುತ್ತಿದ್ದ ಗ್ಯಾಸ್ ಮೈಸೂರು ರಸ್ತೆಯನ್ನು ಆವರಿಸಿತು. ಇದರಿಂದ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಯಿತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಎಚ್ಚರಿಸಲಾಯಿತು. ಅಲ್ಲಿಗೆ ಆಗಮಿಸಿದ ಸಿಬ್ಬಂದಿ ಹತ್ತಿರದ ಫ್ಯಾಕ್ಟರಿಯಿಂದ ಸೋರಿಕೆಯಾದ ಹೊಗೆಯಾಗಿರಬಹುದು ಎಂದು ಆರಂಭದಲ್ಲಿ ಶಂಕಿಸಿದರು.
ಈ ಘಟನೆಯಿಂದ ಇಂದು ಬೆಳಗ್ಗೆ ಮೈಸೂರು ರಸ್ತೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರ ದಟ್ಟಣೆಯುಂಟಾಯಿತು. ನಮಗೆ ಇಲ್ಲಿಯ ತರಹ ಅಶ್ರುವಾಯು ಶೆಲ್ ಗಳನ್ನು ಸಿಡಿಸಲು ಮುಕ್ತ ಪ್ರದೇಶ ಸಿಗುವುದಿಲ್ಲ. ಹಾಗಾಗಿ ಇಲ್ಲಿ ಸೇನಾ ಪಡೆಯ ಮುಖ್ಯಸ್ಥರ ಮೇಲ್ವಿಚಾರಣೆ ಯಲ್ಲಿ ಮಾಡಿದೆವು ಎನ್ನುತ್ತಾರೆ.
ಕೆಲ ಹೊತ್ತಿನ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT