ರಾಜ್ಯ

ಪ್ರೊ.ಚಂಪಾ ಹೇಳಿಕೆ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ

Manjula VN
ಮೈಸೂರು: ಸಾಹಿತ್ಯ ಸಮ್ಮೇಳನದಲ್ಲಿ ಸಾಹಿಸಿ ಪ್ರೊ.ಚಂದ್ರಶೇಖರ ಪಾಟೀಲ್ ಅವರು ನೀಡಿದ್ದ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ. 
ವಿವಾದ ಕುರಿತಂತೆ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಅವರು, ಚಂದ್ರಶೇಖರ್ ಅವರ ಹೇಳಿಕೆಯನ್ನು ರಾಜಕೀಯ ವಿಷಯ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಚಂದ್ರಶೇಖರ ಪಾಟೀಲ್ ಅವರ ಹೇಳಿಕೆಯನ್ನು ವಿರೋಧಿಸುವ ಮೂಲಕ ಬಿಜೆಪಿಯವರು ತಾವು ಕೋಮುವಾದಿಗಳೆಂದು ನಿರೂಪಿಸಿಕೊಂಡಿದ್ದಾರೆ. ಒಬ್ಬ ಸಾಹಿತಿ ಸಾಮಾಜಿಕ ಪ್ರಜ್ಞೆಯಿಂದ ಜಾತ್ಯಾತೀತೆಯನ್ನು ಪ್ರತಿಪಾದಿಸುವುದರಲ್ಲಿ ತಪ್ಪೇನಿದೆ. ಕುಂಬಳ ಕಾಯಿ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವುದು ಎಂದು ಛೇಡಿಸಿದರು. 
SCROLL FOR NEXT