'ಕಾಡಿನ ಮನುಷ್ಯ' ಕೆಂಚಪ್ಪ ಗೌಡ 
ರಾಜ್ಯ

48 ವರ್ಷ ಕಾಡಿನಲ್ಲಿ ಜೀವನ ನಡೆಸಿದ್ದ 'ಕಾಡಿನ ಮನುಷ್ಯ' ಕೆಂಚಪ್ಪ ಗೌಡ ವಿಧಿವಶ

ಸುಮಾರು 42ಕ್ಕೂ ಹೆಚ್ಚು ವರ್ಷಗಳ ಕಾಲ ಪಶ್ಚಿಮಘಟ್ಟ ಸಾಲಿನ ಪೂಮಲೆ ಕಾಡಿನಲ್ಲೇ ವಾಸಿಸುವ ಮೂಲಕ 'ಕಾಡಿನ ಮನುಷ್ಯ' ಎಂದೇ ಗುರ್ತಿಸಿಕೊಂಡಿದ್ದ ಕೆಂಚಪ್ಪ ಗೌಡ (72) ಅವರು ಶುಕ್ರವಾರ...

ಮಂಗಳೂರು: ಸುಮಾರು 42ಕ್ಕೂ ಹೆಚ್ಚು ವರ್ಷಗಳ ಕಾಲ ಪಶ್ಚಿಮಘಟ್ಟ ಸಾಲಿನ ಪೂಮಲೆ ಕಾಡಿನಲ್ಲೇ ವಾಸಿಸುವ ಮೂಲಕ 'ಕಾಡಿನ ಮನುಷ್ಯ' ಎಂದೇ ಗುರ್ತಿಸಿಕೊಂಡಿದ್ದ ಕೆಂಚಪ್ಪ ಗೌಡ (72) ಅವರು ಶುಕ್ರವಾರ ಅನಾರೋಗ್ಯದಿಂದಾಗಿ ವಿಧಿವಶರಾಗಿದ್ದಾರೆ.
ಮರ್ಕಂಜ ಗ್ರಾಮದ ಕೆದಿಕ್ಕಾನದಲ್ಲಿ ತಮ್ಮ ಸಹೋದರನ ಮನೆಯಲ್ಲಿ ಕೆಂಚಪ್ಪ ಗೌಡ ಅವರು ನಿಧನ ಹೊಂದಿದ್ದಾರೆಂದುತಿಳಿದುಬಂದಿದೆ. 
ಚಿಕ್ಕಂದಿನಿಂದಲೂ ಮೌನಿಯಾಗಿದ್ದ ಕೆಂಚಪ್ಪ ಅವರು ತಮ್ಮ 23ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು 7 ಕಿ.ಮೀ ದೂರದ ಬಾಳೆಡಿ ರಕ್ಷಿತಾರಣ್ಯಕ್ಕೆ ತೆರಳಿದ್ದರು. ಕಳೆದ 42 ವರ್ಷಗಳಿಂದ ಪೂಮಲೆ ಕಾಡಿನಲ್ಲೇ ಜೋಪಡಿ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಅವರು, ಯಾರೇ ಬಳಿಗೆ ಹೋದರೂ ಮಾತನಾಡುತ್ತಿರಲಿಲ್ಲ. 
ಬಿದಿರಿನ ಮಂಚ, ಅಡಕೆ ಹಾಳೆ ಅವರ ಹಾಸಿಗೆಯಾಗಿತ್ತು. ಕಾಡಿನ ಗೆಡ್ಡೆಗೆಣಸು, ಹಣ್ಣುಗಳು ಅವರ ಆಹಾರವಾಗಿದ್ದವು. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು ಆಸಕ್ತಿವಹಿಸಿ ಕೆಂಚಪ್ಪ ಗೌಡ ಅವರನ್ನು ಮನೆಗೆ ಕರೆತರುವ ಪ್ರಯತ್ನ ನಡೆಸಿದ್ದರು. ಕಳೆದೊಂದು ವರ್ಷದಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. 
ಸುಳ್ಯಾದಲ್ಲಿ ಮತ್ತೊಬ್ಬ ಕಾಡಿನ ಮನುಷ್ಯ
ಸುಳ್ಯಾ ತಾಲೂಕಿನ ಅರಂತೊಡು ಗ್ರಾಮದಲ್ಲಿ ಕಾಡಿನ ಮನುಷ್ಯರಿದ್ದು, ಕಳೆದ 12 ವರ್ಷಗಳಿಂದ ಚಂದ್ರಶೇಖರ್ ಗೌಡ ಅವರು ಕಾಡಿನಲ್ಲಿ ಜೀವನ ನಡೆಸುತ್ತಿದ್ದಾರೆ. 

ಚಂದ್ರಶೇಖರ್ ಅವರು ವೃತ್ತಿಯಲ್ಲಿ ಕಾರು ಚಾಲಕರಾಗಿದ್ದು, ಕೋಅಪರೇಟಿವ್ ಸೊಸೈಟಿಯಲ್ಲಿ ಸಾಲವನ್ನು ಪಡೆದುಕೊಂಡಿದ್ದರು. ಸಾಲವನ್ನು ತೀರಿಸಲು ಸಾಧ್ಯವಾಗದೆ ತೀವ್ರವಾಗಿ ನೊಂದು ಚಂದ್ರಶೇಖರ್ ಅವರು ಕಾಡಿನಲ್ಲಿ ವಾಸ ಮಾಡಲು ಆರಂಭಿಸಿದ್ದರು. ಬಳಿಕ ಈ ಬಗ್ಗೆ ಮಾಹಿತಿ ತಿಳಿದಿದ್ದ ಉಪಆಯುಕ್ತ ಎ.ಬಿ. ಇಬ್ರಾಹಿಂ ಅವರು ವರ್ಷಗಳ ಹಿಂದೆ ತಮ್ಮ ಕಚೇರಿಗೆ ಚಂದ್ರಶೇಖರ್ ಅವರನ್ನು ಕರೆದುಕೊಂಡು ಹೋಗಿ, ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ 1 ಎಕರೆ ಭೂಮಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಿಗಳ ಮಾತನ್ನು ಕೇಳದ ಚಂದ್ರಶೇಖರ್ ಅವರು ಈಗಲೂ ಕಾಡಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT