ರಾಸಲೀಲೆ ವಿಡಿಯೋ ಪ್ರಕರಣ: ಮಠದ ಅಧ್ಯಕ್ಷ ಮತ್ತು ಪುತ್ರನಿಗೆ 15 ದಿನದೊಳಗೆ ಮಠ ತೊರೆಯುವಂತೆ ಸೂಚನೆ
ಬೆಂಗಳೂರು: ಗ್ರಾಮಸ್ಥರು ಮತ್ತು ಭಕ್ತರು ಪಟ್ಟದ ಪರ್ವತರಾಜ ಶಿವಚಾರ್ಯರನ್ನು ಹೊರಹಾಕಲು ಪ್ರತಿಭಟನೆ ನಡೆಸಿದ ಎರಡು ದಿನಗಳ ನಂತರ, ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಹುಸಸರಾನಹಳ್ಳಿ ಮದ್ದೇವಣಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಮುಖ್ಯಸ್ಥ, ಮತ್ತು ಅವರ ಪುತ್ರ ದಯಾನಂದ ಸ್ವಾಮಿ ಅಲಿಯಾಸ್ ಗುರುನಾಜೇಶ್ವರ, , ಮಠ ತೊರೆಯಲು 15 ದಿನಗಳ ಕಾಲಾವಕಾಶವನ್ನು ಶ್ರೀ ಶೈಲ ಸ್ವಾಮಿಗಳು ನೀಡಿದ್ದಾರೆ.
ಶ್ರೀಶೈಲಂ ಪೀಠದ ಸ್ವಾಮಿಗಲಾದ, ಪಂಡಿತಾರಾದ್ಯ ಶಿವಾಚಾರ್ಯ, ನಿನ್ನೆ ಇಲ್ಲಿಗೆ ಆಗಮಿಸಿದ ಅವರು ಸ್ಥಳೀಯರೊಂದಿಗೆ ಸಭೆಯನ್ನು ನಡೆಸಿದರು ಮತ್ತು ಮಠದಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದ್ದಾರೆ. ಶ್ರೀಶೈಲಂ ಪೀಠದ ಅಡಿಯಲ್ಲಿ ಹುಣಸೆಮಾರನಹಳ್ಳಿ ಮಠ ಬರುತ್ತದೆ. ಸ್ವಾಮಿಗಳು ಮಠಕ್ಕೆ ಆಗಮಿಸಿದಾಗ ಸ್ಥಳೀಯರು ಇಲ್ಲಿನ ಪೀಠಾಧ್ಯಕ್ಷರನ್ನು ವಜಾ ಗೊಳಿಸುವಂತೆ ಆಗ್ರಹಿಸಿದರು. ಆಗ ಮಠದ ವಿರುದ್ಧ ಘೋಷಣೆ ಕೂಗುತ್ತಿದ್ದ ಗುಂಪಿನ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದರು.
ಇದೇ ವೇಳೆ ದಯಾನಂದ ಸ್ವಾಮಿ ಮತ್ತು ಸಹ ನಟಿ ಇರುವ ವೀಡಿಯೋ ಒದೊಂದು ಹನಿಟ್ರ್ಯಾಪ್ ಆಗಿದ್ದು ದಯಾನಂದ ಸ್ವಾಮಿ `20 ಲಕ್ಷ ಕೊಡುವಂತೆ ಪಿತೂರಿದಾರರು ಬೇಡಿಕೆ ಇಟ್ಟಿದ್ದರು. ಸ್ಥಳೀಯ ಯುವಕರಾದ ಹರೀಶ್ ಮತ್ತು ಪ್ರವೀಣ್ ಇದರಲ್ಲಿ ಭಾಗಿಗಳಗಿದ್ದಾರೆ ಎಂದು ಮಠದ ಟ್ರಸ್ಟಿಗಳದ ರುದ್ರಾರಾದ್ಯ ಹೇಳಿದ್ದಾರೆ.
ಪ್ರಾರಂಭದಲ್ಲಿ ಹಿಮಾಚಲಪತಿ ಲೈಂಗಿಕ ವೀಡಿಯೋ ಎಂಬ ಹೆಸರಲ್ಲಿ ಹರೀಶ್ ಕೆಲವು ಸ್ಥಳೀಯರಿಗೆ ಈ ವೀಡಿಯೋ ಕಳುಹಿಸಿದ್ದಾರೆ. "ದಯಾಮಂದದಿಂದ 20 ಲಕ್ಷ ರೂ. ಪಡೆಯಲು ಹಿಮಾಚಲಪತಿ ಹರೀಶ್ ನನ್ನು ಕೇಳಿಕೊಂಡಿದ್ದಾನೆ ಮತ್ತು oತಮ್ಮ ಯೋಜನೆ ಯಶಸ್ವಿಯಾದ ನಂತರ ಹರೀಶ್ ಗೆ 1 ಲಕ್ಷ ನೀಡುವುದಾಗಿ ಹೇಳಿದ್ದರು. ಆದರೆ ಹರೀಶ್ ಪ್ರವೀಣ್ ಕುಮಾರ್ ಈ ಹನಿಟ್ರ್ಯಾಪ್ ಹಿಂದಿದ್ದಾನೆ ಎಂದು ಹೇಳುವ ಮೂಲಕ ಹೊಸ ದಿಕ್ಕಿಗೆ ಪ್ರಕರಣವನ್ನು ಹೊರಳಿಸಿದ್ದಾರೆ, ತನ್ನ ವಿಡಿಯೋ ಹೇಳಿಕೆಯಲ್ಲಿ ಹಿಮಾಚಲಪತಿ ಹೆಸರು ಹೇಳುವಂತೆ ಜಗದೀಶ್ ಅವರಿಗೆ ಬೆದರಿಕೆ ಹಾಕಿದ್ದರು. ಹರೀಶ್ ಹೇಳಿದಂತೆ ಆತ ಕುಡಿದಿದ್ದಾಗ ಅವರು ವಿಚಾರಿಸಿದ್ದಾರೆ. ಹಾಗೆಯೇ ಹರೀಶ್ ತನ್ನ ಜೀವವು ಅಪಾಯದಲ್ಲಿದೆ ಎಂದು ಒಪ್ಪಿಕೊಂಡಿದ್ಡಾನೆ. ರುದ್ರಾರಾದ್ಯ ಹೇಳಿದರು. "ಸ್ವಾಮಿ ಮತ್ತು ಅವರ ಮಗನನ್ನು ಹೊರಹಾಕುವವರೆಗೂ ನಾವು ಹಸಿವಿನಿಂದ ನಿಲ್ಲುವುದಿಲ್ಲ" ಎಂದು ರುದ್ರಾರಾದ್ಯ ನುಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos