ಗೌರಿ ಲಂಕೇಶ್ 
ರಾಜ್ಯ

1.2 ಬಿಲಿಯನ್ ಮಂದಿಗೆ ನೊಟೀಸ್ ಕಳುಹಿಸಲಿ: ಮೇಧಾ ಪಾಟ್ಕರ್

ಗೌರಿ ತಮ್ಮ ಲೇಖನಗಳನ್ನು ಪ್ರಚೋದನಾಕಾರಿಯಾಗಿ ಬರೆಯುತ್ತಿರಲಿಲ್ಲ, ಆಕೆ ಯಾವಾಗಲೂ, ದಲಿತರು, ಆದಿವಾಸಿಗಳು, ಮತ್ತು ಹಿಂದುಳಿದ ವರ್ಗಗಳ...

ಬೆಂಗಳೂರು: ಗೌರಿ ತಮ್ಮ ಲೇಖನಗಳನ್ನು ಪ್ರಚೋದನಾಕಾರಿಯಾಗಿ ಬರೆಯುತ್ತಿರಲಿಲ್ಲ,  ಆಕೆ ಯಾವಾಗಲೂ, ದಲಿತರು, ಆದಿವಾಸಿಗಳು, ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಸದಾ ದನಿಯೆತ್ತುತ್ತಿದ್ದರು. ಅಧಿಕಾರದಲ್ಲಿರುವ ಕೆಲ ಹೇಡಿಗಳ ವಿರುದ್ಧ ಮಾತನಾಡಿದ್ದಕ್ಕೆ ಗೌರಿ ಅವರ ವಿರೋಧ ಕಟ್ಟಿಕೊಂಡಿದ್ದರು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದ್ದಾರೆ.
ಪತ್ರಕರ್ತೆ  ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ನಾನು ಗೌರಿ ಪ್ರತಿರೋಧ ಸಮಾವೇಶದಲ್ಲಿ ಮಾತನಾಡಿದ ಅವರು, ಮಾತನಾಡಿದ್ದಕ್ಕೆ ಗೌರಿಯನ್ನು ಕೊಲ್ಲಲಾಯಿತು. ರಾಮಚಂದ್ರ ಗುಹಾ ಮಾತನಾಡಿದ್ದಕ್ಕೆ, ನೊಟೀಸ್ ನೀಡಲಾಗಿದೆ, 1.2 ಬಿಲಿಯನ್ ಜನಕ್ಕೆ ಈಗ ನೊಟೀಸ್ ನೀಡಲಿ ಎಂದು ಸವಾಲು ಹಾಕಿದ ಅವರು ಮೋದಿ ಏಕೆ ಮಾತನಾಡುತ್ತಿಲ್ಲ, ಮೋದಿ ಎಲ್ಲಿ ಎಂದು ಪ್ರಶ್ನಿಸಿದರು. 
ಇನ್ನೂ ಇದೇ ವೇಳೆ ಮಾತನಾಡಿದ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ನಾನು ಭಾರತೀಯ ಪ್ರಜಾಪ್ರಭುತ್ವದ ಸೈನಿಕ, ಅಧಿಕಾರದಲ್ಲಿರುವವರು ನಿರಂಕುಶಾಧಿಕಾರಿಗಳಂತೆ ಮೆರೆಯುತ್ತಿದ್ದಾರೆ. ಹಿಂದೂ ರಾಷ್ಟ್ರ ಬೇಕೆಂದು ಬಯಸಿದವರಿಗೆ ಮಹಾತ್ಮ ಗಾಂಧಿ ಬಲಿಪಶುವಾದರು, ತಮ್ಮ ತತ್ವ ಸಿದ್ದಾಂತಗಳಿಂದ ಗೌರಿ ಅವರನ್ನು ಹೊರ ಹಾಕಲು ಸಾಧ್ಯವೇ ಇಲ್ಲ, ಅವರ ತತ್ವಗಳು ಬುಲೆಟ್ ವಿರುದ್ಧ ಹೋರಾಡುತ್ತವೆ ಎಂದು ಹೇಳಿದ್ದಾರೆ. ಸಾಹಿತಿ ಚಂದ್ರ ಶೇಖರ್ ಪಾಟೀಲ್ ಗೌರಿ ಲಂಕೇಶ್ ನೆನಪಿಗಾಗಿ ಶೋಕಗೀತೆ ಹಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT