ಐಟಿ ಅಧಿಕಾರಿ ಪುತ್ರನ ಅಪಹರಣ,
ಬೆಂಗಳೂರು: ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿ ಪುತ್ರನನ್ನು ಅಪಹರಿಸಿ 50 ಲಕ್ಷ ರೂ. ಗೆ ಬೇಡಿಕೆ ಇಡಲಾಗಿದೆ.
ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೆಂಗೇರಿ ಉಳ್ಳಾಲದಲ್ಲಿರುವ ನಿರಂಜನ್ ಎನ್ನುವ ಅಧಿಕಾರಿ ಪುತ್ರ ಶರತ್ ನ್ನು ಎರಡು ದಿನಗಳ ಹಿಂದೆ ಅಪಹರಿಸಲಾಗಿದೆ.
ಹತ್ತೊಂಭತ್ತು ವರ್ಷದ ಶರತ್ ನನ್ನು ಬಿಡುಗಡೆ ಮಾಡಬೇಕಿದ್ದರೆ 50 ಲಕ್ಷ ರೂ.ಹಣ ಕೊಡಬೇಕೆಂದು ಬೆದರಿಕೆ ಹಾಕಿ ಶರತ್ ತಂದೆ, ತಾಯಿ ಹಾಗೂ ಸೋದರನ ವಾಟ್ಸ್ ಆಪ್ ಗೆ ಸಂದೇಶ ಕಳಿಸಲಾಗಿದೆ.
ಶರತ್ 2ನೇ ವರ್ಷದ ಡಿಪ್ಲೋಮಾ ಓದುತ್ತಿದ್ದು, ಅಪಹರಣದ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ತಂದೆ ನಿರಂಜನ್ ದೂರು ಸಲ್ಲಿಸಿದ್ದಾರೆ. ಪೊಲೀಸರು ಅಪಹರಣಕಾರರ ಜಾಡು ಪತ್ತೆ ಹಚ್ಚಲು ಕಾರ್ಯತತ್ಪರರಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos