ಬೆಂಗಳೂರಿನಲ್ಲಿ ಲ್ಯಾಪ್ ಟಾಪ್ ಕಳ್ಳರ ಬಂಧನ 
ರಾಜ್ಯ

ಬೆಂಗಳೂರು: ಅಂಧರು ಎಂದು ಹೇಳಿಕೊಂಡು 85 ಲ್ಯಾಪ್ ಟಾಪ್ ಕದ್ದ ಖದೀಮರು!

ಬೆಂಗಳೂರಿನ ವಿವಿಧೆಡೆಗಳಲ್ಲಿ ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಕದಿಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ಬೆಂಗಳೂರಿನ ವಿವಿಧೆಡೆಗಳಲ್ಲಿ ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಕದಿಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ನಗರದ ಪೇಯಿಂಗ್ ಗೆಸ್ಟ್  ನಲ್ಲಿರುತ್ತಿದ್ದ ಬಾಡಿಗೆದಾರರನ್ನು ಗುರಿಯಾಗಿಟ್ಟುಕೊಂಡು ಇವರು ಕಳ್ಳತನ ನಡೆಸುತ್ತಿದ್ದರು.
ಮಡಿವಾಳ ಠಾಣಾ ಪೋಲೀಸರು ಈ ಇಬ್ಬರನ್ನು ಬಂಧಿಸಿದ್ದು ಬಂಧಿತರಿಂದ 30 ಲಕ್ಷ ಮೌಲ್ಯದ 85 ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನ ಮೂಲದ ರಮೇಶ್ ಮತ್ತು ಮಣಿಕಂಠನ್ ಬಂಧಿತರು. 
ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರಲ್ಲಿ ಮುಖ್ಯ ಆರೋಪಿ ಮಣಿಕಂಠನ್ ಇಂಜಿನಿಯರಿಂಗ್ ಪದವಿ ಮತ್ತು ಲ್ಯಾಪ್ ಟಾಪ್  ಕುರಿತಂತೆ ತಾಂತ್ರಿಕ ಜ್ಞಾನವನ್ನು ಹೊಂದಿದ್ದಾನೆ.  ಲ್ಯಾಪ್ ಟಾಪ್ ಗಳನ್ನು ಕದಿಯಲು ಇತರೆ ನಾಲ್ವರಿಗೆ ಈತನು ತರಬೇತಿ ನೀಡಿದ್ದನು ಎಂದು ಪೋಲೀಸರು ತಿಳಿಸಿದರು.
ಆರೋಪಿಗಳು ಮಡಿವಾಳ, ಕೋರಮಂಗಲ, ಬ್ಯಾಟರಾಯನಪುರ, ಎಚ್ ಎಸ್ ಆರ್ ಲೇಔಟ್ ಮತ್ತು ಸುದ್ದಗುಂಟೇಪಾಳ್ಯ ಪ್ರದೇಶಗಳಲ್ಲಿ ಕಳ್ಳತನ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
"ತನಿಖೆಯ ಸಮಯದಲ್ಲಿ, ಹೇಳಿದಂತೆ ಇಬ್ಬರು ಆರೋಪಿಗಳು ಮನೆಗಳಿಗೆ ಅಥವಾ ಪಿಜಿ ಗೆ ತೆರಳಿ ದೃಷ್ಟಿ ದೋಷ ಇರುವವರಿಗೆ, ದುರ್ಬಲರಿಗೆ ಸಹಾಯ  ಮತ್ತು ದೇಣಿಗೆಗಾಗಿ ಮನವಿ ಮಾಡುತ್ತಾರೆ. ಮನೆ ಮಾಲೀಕರು, ಬಾಡಿಗೆದಾರರ ಮನಸ್ಸನ್ನು ಬೇರೆಡೆ ತಿರುಗುವಂತೆ ಮಾಡುವಲ್ಲಿ ಸಪಲರಾಗುವ ಇವರು ಮನೆಯಲ್ಲಿರುವ ಲ್ಯಾಪ್ ಟಾಪ್ ಗಳನ್ನು ಕದಿಯುತ್ತಿದ್ದರು೭" ಎಂದು ಪೋಲೀಸರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT