ರಾಜ್ಯ

ಯಾದಗಿರಿ: ಸಿಡಿಲು ಬಡಿದು ಮೂರು ಮಕ್ಕಳು ಸೇರಿ ನಾಲ್ವರ ಸಾವು

Lingaraj Badiger
ಯಾದಗಿರಿ: ಸಿಡಿಲು ಬಡಿದು ಮೂರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಯಾದಗಿರಿ ತಾಲೂಕಿನ ಗೌಡಗೇರಾ ಗ್ರಾಮದ ಹೊರಭಾಗದಲ್ಲಿ ಗುರುವಾರ ನಡೆದಿದೆ.
ನಾಗಪ್ಪ ಹೊಸಮನಿ(40), ನಾಗರಾಜ (14), ಮೀನಾಕ್ಷಿ(6) ಮತ್ತು ಕರೆಪ್ಪ(15) ಸಿಡಿಲು ಬಡಿದು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿ ಮೇಯಿಸಲು ಹೋದಾಗ ಈ ಘಟನೆ ಸಂಭವಿಸಿದ್ದು, ಅವಘಡದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. 
SCROLL FOR NEXT