ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಫೇಸ್ ಬುಕ್ ನಲ್ಲಿ ಸ್ಪಾ ಮಾಲೀಕರ ಅವಹೇಳನ ದೂರು ದಾಖಲು

ತನ್ನನ್ನು ಕೆಲಸದಿಂಡ ವಜಾ ಗೊಳಿಸಿದ್ದರಿಂದ ಹತಾಶೆಗೊಳಗಾದ ಎಂಬಿಎ ಪದವೀಧರನೊಬ್ಬ ತಾನು ಕೆಲ್ಸ ಮಾಡುತ್ತಿದ್ದ ಸ್ಪಾ, ಸಲೂನ್ ಮಾಲೀಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ...

ಬೆಂಗಳೂರು: ತನ್ನನ್ನು ಕೆಲಸದಿಂಡ ವಜಾ ಗೊಳಿಸಿದ್ದರಿಂದ ಹತಾಶೆಗೊಳಗಾದ ಎಂಬಿಎ ಪದವೀಧರನೊಬ್ಬ ತಾನು ಕೆಲಸ ಮಾಡುತ್ತಿದ್ದ ಸ್ಪಾ, ಸಲೂನ್ ಮಾಲೀಕಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸ್ಪಾ-ಸಲೂನ್ ಮಾಲೀಕಳಾದ  ದೀಪಾಲಿ ರಾಯ್ (ಹೆಸರು ಬದಲಿಸಲಾಗಿದೆ) ಮೊದಲಿಗೆ ಆ ಯುವಕನಿಗೆ ತನ್ನ ವಿರುದ್ಧ ದ ಬರಹಗಳನ್ನು ತೆಗೆದು ಹಾಕುವಂತೆ ವಿನಂತಿಸಿದ್ದಾರೆ. ಆದರೆ ಯುವಕ ಮಾತ್ರ ಅವರ ಪುನರಾವರ್ತಿತ ವಿನಂತಿಗಳಿಗೆ ಕಿವಿಗೊಡಲಿಲ್ಲ. ಈಗ ಮಹಿಳೆಯು ಯುವಕನ ವಿರುದ್ಧ ಪೋಲೀಸರಿಗೆ ದೂರಿತ್ತಿದ್ದಾರೆ.
ಬೆಂಗಳೂರು ವೈಟ್ ಫೀಲ್ಡ್ ನಲ್ಲಿರುವ ಪ್ರೆಸ್ಟೀಜ್ ಶಾಂತಿನಿಕೇತನ ನಿವಾಸಿಯಾದ ದೀಪಾಲಿ ಕೋಲ್ಕತ್ತಾ ಮೂಲದವರು. ಎರಡು ಸಲೂನ್ ಗಳ ಮಾಲೀಕರಾದ ಈಕೆಯ ಕೈಕೆಳಗೆ ಸುಮಾರು 15 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಹಿಂದಿನ ಮ್ಯಾನೇಜರ್ ಒಬ್ಬ ನಗದನ್ನು ಕಳವು ಮಾಡಿ ಪರಾರಿಯಾದ ಬಳಿಕ ಡಿಸೆಂಬರ್ 2017ರಲ್ಲಿ ಈಕೆ ಚಂದನ್ ಶಾ ನನ್ನು ಸಲೂನ್ ಹಾಗೂ ಸ್ಪಾ ಗಳ ನೂತನ ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡಿದ್ದರು.
"ಆತ ಪ್ರಾರಂಭದಲ್ಲಿ ಒಳ್ಳೆಯ ಕೆಲಸಗಾರನಾಗಿದ್ದ ಆದರೆ ತಿಂಗಳು ಕಳೆದಂತೆ ಹೆಚ್ಚು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ಪ್ರಾರಂಭಿಸಿದ್ದ. ಕೆಲಸದ ಕಡೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿರಲಿಲ್ಲ. ನಾನು ಅವನಿಗೆ ಸಾಕಷ್ಟು ಬಾರಿ ಎಚ್ಚರಿಸಿದೆ ಆದರೆ ಆತ ತಿದ್ದಿಕೊಳ್ಳಲಿಲ್ಲ. ಕಡೆಗೆ ಆತ ಸ್ಪಾ, ಸಲೂನ್ ನಲ್ಲಿನ ಇತರೆ ಸಿಬ್ಬಂದಿಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ. ನನ್ನ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ನಾನವನನ್ನು ಕೆಲಸದಿಂದ ವಜಾ ಮಾಡಿದೆ. ಫೆಬ್ರವರಿಯಲ್ಲಿ ಆತ ಕೆಲಸ ಬಿಟ್ಟು ತೆರಳಿದ" ದೀಪಾಲಿ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಹೀಗೆ ಕೆಲಸ ಕಳೆದುಕೊಂಡ ಚಂದನ್ ದೀಪಾಲಿಗೆ ಪದೇ ಪದೇ ಕರೆ ಮಾಡಿ ನಿಂದಿಸುತ್ತಿದ್ದ. ಕೆಟ್ಟ ಭಾಷೆಗಳನ್ನು ಬಳಸಿ ಬೈಯ್ದಾಡುತ್ತಿದ್ದ. ಅಲ್ಲದೆ ಸ್ಪಾ ಹಾಗು ಸೆಲೂನ್ ಬಗ್ಗೆ ನಕಾರಾತ್ಮಕ ಭಾವನೆ ಬರುವಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುತ್ತಿದ್ದ. "ಸೆಲೂನ್ ಮಾಲೀಕಳು ಚೀಪ್ ಮೆಂಟಾಲಿಟಿ ಹೊಂದಿದ್ದಾರೆ, ಅವರು ತಮ್ಮ ಸಿಬ್ಬಂದಿಗಳಿಗೆ ಸರಿಯಾಗಿ ವೇತನ ಪಾವತಿಸುವುದಿಲ್ಲ" ಎಂದೆಲ್ಲಾ ಬರೆಯಲು ಪ್ರಾರಂಭಿಸಿದ್ದ. ಅಲ್ಲದೆ ನನ್ನ ಬಗ್ಗೆ ಕೆಟ್ಟ ಭಾಷೆಗಳನ್ನು ಬಳಸಿ ಪೋಸ್ಟ್ ಬರೆದಿದ್ದದ್ದು ಇದೆ"
"ನಾನು ಸಾಕಷ್ಟು ಕೇಳಿಕೊಂಡರೂ ಆತ ತಾನು ಕೆಟ್ಟದಾಗಿ ಪೋಸ್ಟ್ ಮಾಡುವುದು ಬಿಟ್ಟಿಲ್ಲ, ನನ್ನ ವಾಟ್ಸ್ ಅಪ್ ಗೆ ಅಸಭ್ಯ ಸಂದೇಶಗಳನ್ನು ಕಳಿಸಿದ್ದ. ಇಷ್ಟೇಲ್ಲವನ್ನು ಒಂದು ತಿಂಗಳಿನಿಂದ ಸಹಿಸಿಕೊಂಡು ಬಳಿಕ ನಾನು  ಪೊಲೀಸರಿಗೆ ದೂರು ನೀಡಿದೆ" ದೀಪಾಲಿ ಹೇಳಿದ್ದಾರೆ.
ದೂರಿನ ಸಂಬಂಧ ತನಿಖೆ ಕೈಗೊಂಡಿದ್ದೇವೆ. ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೋಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT