ರಾಜ್ಯ

ಸ್ವಾತಂತ್ರ್ಯ ದಿನಾಚರಣೆ : ಮಾಣಿಕ್ ಷಾ ಪರೇಡ್ ಮೈದಾನ ಪ್ರವೇಶಕ್ಕೆ, ಸುತ್ತಮುತ್ತ ಹಲವು ನಿರ್ಬಂಧ

Nagaraja AB

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಪ್ರಧಾನ ಸಮಾರಂಭ ನಡೆಯುವ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕೈಗೊಂಡಿರುವ  ಭದ್ರತಾ ವ್ಯವಸ್ಥೆ ಕುರಿತಂತೆ ನಗರ ಪೊಲೀಸ್ ಆಯುಕ್ತ  ಸುನೀಲ್ ಕುಮಾರ್ ಮಾಹಿತಿ ನೀಡಿದರು.

9 ಡಿಸಿಪಿಗಳು, 16 ಎಸಿಪಿಗಳು, 46 ಪಿಐಎಸ್ , 102 ಎಸ್ ಐಗಳು, 77, ಎಎಎಸ್ ಐ, 540 ಮುಖ್ಯ ಪೇದೆಗಳು 75 ಮಹಿಳಾ ಪೊಲೀಸ್  ಹಾಗೂ 114 ಪುರುಷ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಇಬ್ಬರು ಡಿಸಿಪಿ, ಏಳು ಎಸಿಪಿ, 24 ಪಿಐಎಸ್, 38 ಪಿಎಸ್ ಐಗಳು, 263  ಮುಖ್ಯ ಪೇದೆಗಳು ಹಾಗೂ ಒಟ್ಟಾರೇ, 1500 ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಕ್ರೀಡಾಂಗಣದ ಸುತ್ತ ಕೆಎಸ್ ಆರ್ ಪಿಯ 9 ತುಕಡಿಗಳು, ಐದು ಸಿಎಆರ್ , ಮೂರು ಅಗ್ನಿಶಾಮಕ ವಾಹನ,  ಎರಡು ಅಂಬ್ಯುಲೆನ್ಸ್,  ಎರಡು ಕ್ಷಿಪ್ರ ಕಾರ್ಯಕಡೆ ತಂಡ, ಹಾಗೂ ಗರುಡ ಪಡೆಯನ್ನು ನಿಯೋಜಿಸಲಾಗಿದ್ದು,ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ  ಹಾಸಿಗೆ ವ್ಯವಸ್ಥೆ ಸಿದ್ಧವಿರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

 ಹೋಟೆಲ್ ಮತ್ತು ಲಾಡ್ಜ್ ಗಳಲ್ಲಿ ಶಂಕಿತರ ಬಗ್ಗೆ ಪರಿಶೀಲನೆ ನಡೆಸಲಾಗಿದೆ.  ವೇದಿಕೆ ಸುತ್ತಲೂ ಒಟ್ಟು 50 ಸಿಸಿಟಿವಿ ಕ್ಯಾಮರಾಗಳು ಮತ್ತು ನಾಲ್ಕು ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಲಾಗುತ್ತಿದೆ. ಸಿಗರೇಟ್, ಮದ್ಯ, ಲೈಟರ್ , ವಿಡಿಯೋ ಕ್ಯಾಮರಾ,  ಪಟಾಕಿ ಮತ್ತಿತರ ವಸ್ತುಗಳನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

 ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಂದು ಬೆಳಗ್ಗೆ 9 ಗಂಟೆಗೆ ವೇದಿಕೆಗೆ ಆಗಮಿಸಲಿದ್ದು, ಧ್ವಜಾರೋಹಣ ನೆರವೇರಿಸಲಿದ್ದಾರೆಯ ವಾಯುಪಡೆ ಸಿಬ್ಬಂದಿಯಿಂದ ಗೌರವ ವಂದನೆ ಸ್ವಿಕರಿಸಿ ಭಾಷಣ ಮಾಡಲಿದ್ದಾರೆ. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
SCROLL FOR NEXT