ರಾಜ್ಯ

ಪಲ್ಟಿ ಹೊಡೆದ ಟ್ರಕ್: ಚಾರ್ಮಾಡಿ ಘಾಟ್ ಬಳಿ ಭಾರೀ ಸಂಚಾರ ದಟ್ಟಣೆ, ಸಾವಿರಾರು ಜನರ ಪರದಾಟ

Manjula VN
ಬೆಳ್ತಂಗಡಿ: ಬೆಂಗಳೂರು ನಗರದಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಟ್ರಕ್ ವೊಂದು ಪಲ್ಟಿ ಹೊಡೆದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ ಸಾವಿರಾರು ಜನರು ಗಂಟೆಗಟ್ಟಲೆ ನಿಂತು ಪರದಾಡುವಂತಹ ಪರಿಸ್ಥಿತಿ ಎದುರಾಯಿತು. 
ಶಿರಾಡಿ ಘಾಟ್ ಮತ್ತು ಸಂಪಾಜೆ ಘಾಟಿಯಲ್ಲಿ ಸಂಪರ್ಕ ಸಾಧ್ಯವಾಗದ ಕಾರಣ ಹೆಚ್ಚಿನ ವಾಹನಗಳು ಚಾರ್ಮಾಡಿ ಘಾಟ್'ನಲ್ಲಿ ಬರುತ್ತಿವೆ. 
10ನೇ ತಿರುವಿನಲ್ಲಿ ಟ್ರಕ್ ವೊಂದು ಮಾರ್ಗದ ಮಧ್ಯೆಯೇ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿದೆ. 
ಭಾರಿ ಮಳೆಯಾಗುತ್ತಿರುವ ಪರಿಣಾಮ ಚಾರ್ಮಾಡಿ ಘಾಟಿನಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ಈಗಾಗಲೇ ನಿಷೇಧ ಹೇರಲಾಗಿದೆ. ಆದರು, ವಾಹನಗಳು ಸಂಚಾರ ನಡೆಸುತ್ತಿರುವ ಸಮಸ್ಯೆ ಉಂಟಾಗುವಂತೆ ಮಾಡಿದೆ. 
SCROLL FOR NEXT