ಬೂ ಕುಸಿತದಿಂದ ಹಾನಿಗೊಳಗಾದ ರಸ್ತೆ 
ರಾಜ್ಯ

ಕೊಡಗು: ಮತ್ತಷ್ಟು ಮೃತದೇಹ ಪತ್ತೆ, ಸತ್ತವರ ಸಂಖ್ಯೆ 15ಕ್ಕೆ ಏರಿಕೆ

: ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 15 ರಿಂದ ಇಲ್ಲಿಯವರೆಗೂ ಎನ್ ಡಿಆರ್ ಎಫ್ ಮತ್ತು ಭಾರತೀಯ ಸೇನೆ ವಿವಿಧ ಪ್ರದೇಶಗಳಲ್ಲಿ ...

ಮಡಿಕೇರಿ: ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 15 ರಿಂದ ಇಲ್ಲಿಯವರೆಗೂ ಎನ್ ಡಿಆರ್ ಎಫ್ ಮತ್ತು ಭಾರತೀಯ ಸೇನೆ ವಿವಿಧ ಪ್ರದೇಶಗಳಲ್ಲಿ ಉಂಟಾದ ಭೂ ಕುಸಿತಕ್ಕೆ ಬಲಿಯಾದ ಸುಮಾರು 15 ಮಂದಿ ಶವಗಳನ್ನು ಹೊರತೆಗೆದಿದ್ದಾರೆ.
ಈ ಸಂಬಂಧ ಜಿಲ್ಲಾಡಳಿತ ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ಸತ್ತವ ಸಂಖ್ಯೆ 15 ಎಂದು ಹೇಳಿದೆ.
ಆಗಸ್ಟ್ 8 ರಂದು ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದ, ಮತ್ತಿಬ್ಬರು ಮರ ಮೇಲೆ ಬಿದ್ದುಿ ಸಾವನ್ನಪ್ಪಿದ್ದರು, ಉಳಿದ 12 ಮಂದಿ ಭೂ ಕುಸಿತಕ್ಕೆ ಬಲಿಯಾಗಿದ್ದಾರೆ. 
ಆಂಧ್ರ ಪ್ರದೇಶದಿಂದ ಬಂದಿರುವ ಎನ್ ಡಿ ಆರ್ ಎಫ್ 10ನೇ ಬೆಟಾಲಿಯನ್ ನ 30 ಸದಸ್ಯರ ತಂಡ ಬುಧವಾರ ದಿನಗೂಲಿ ನೌಕರ ಪವನ್ ಎಂಬುವರ ಶವ ಹೊರತೆಗೆಯಲಾಗಿದೆ.500 ಮೀಟರ್ ಮಣ್ಣಿನ ಪದರದೊಳಗೆ ಪವನ್ ದೇಹ ಸಿಲಕಿತ್ತು, ಸುಮಾರು 2 ಗಂಟೆ ಕಾರ್ಯಾಚರಣೆ ಇದಾಗಿತ್ತು. 
ಸ್ಥಳೀಯರಿಂದ ಅಲ್ಲಿನ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದು, ಶವ ಹೊರತೆಗೆದವು, ಮಂಡಿವರೆಗೂ  ಮುಳುಗುವ ನೀರಿನಲ್ಲಿ ಹಗ್ಗ ಕಟ್ಟಿಕೊಂಡು ಹೊರ ತೆಗೆದಿದ್ದಾರೆ,. 
ಇನ್ನು ಮತ್ತೊಂದು ಕಾರ್ಯಾಚರಣೆ ಮಕ್ಕಂದೂರು ಗ್ರಾಮದಲ್ಲಿ ಭಾರತೀಯ ಸೇನೆ ನಡೆಸಿದೆ, ಭೂ ಕುಸಿತದಿಂದ ಸಾವನ್ನಪ್ಪಿದ್ದ 2 ದೇಹಗಳನ್ನು ಹೊರೆ ತೆಗದಿದ್ದಾರೆ, ಚಂದ್ರಾವತಿ ಮತ್ತು ಆಕೆ ಪುತ್ರ ಉಮೇಶ್ ರೈ ಎಂಬುವರ ಶವಗಳಾಗಿವೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ವೈಮಾನಿಕ ,ಸಮೀಕ್ಷೆ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT