ಬೂ ಕುಸಿತದಿಂದ ಹಾನಿಗೊಳಗಾದ ರಸ್ತೆ
ಮಡಿಕೇರಿ: ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 15 ರಿಂದ ಇಲ್ಲಿಯವರೆಗೂ ಎನ್ ಡಿಆರ್ ಎಫ್ ಮತ್ತು ಭಾರತೀಯ ಸೇನೆ ವಿವಿಧ ಪ್ರದೇಶಗಳಲ್ಲಿ ಉಂಟಾದ ಭೂ ಕುಸಿತಕ್ಕೆ ಬಲಿಯಾದ ಸುಮಾರು 15 ಮಂದಿ ಶವಗಳನ್ನು ಹೊರತೆಗೆದಿದ್ದಾರೆ.
ಈ ಸಂಬಂಧ ಜಿಲ್ಲಾಡಳಿತ ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ಸತ್ತವ ಸಂಖ್ಯೆ 15 ಎಂದು ಹೇಳಿದೆ.
ಆಗಸ್ಟ್ 8 ರಂದು ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದ, ಮತ್ತಿಬ್ಬರು ಮರ ಮೇಲೆ ಬಿದ್ದುಿ ಸಾವನ್ನಪ್ಪಿದ್ದರು, ಉಳಿದ 12 ಮಂದಿ ಭೂ ಕುಸಿತಕ್ಕೆ ಬಲಿಯಾಗಿದ್ದಾರೆ.
ಆಂಧ್ರ ಪ್ರದೇಶದಿಂದ ಬಂದಿರುವ ಎನ್ ಡಿ ಆರ್ ಎಫ್ 10ನೇ ಬೆಟಾಲಿಯನ್ ನ 30 ಸದಸ್ಯರ ತಂಡ ಬುಧವಾರ ದಿನಗೂಲಿ ನೌಕರ ಪವನ್ ಎಂಬುವರ ಶವ ಹೊರತೆಗೆಯಲಾಗಿದೆ.500 ಮೀಟರ್ ಮಣ್ಣಿನ ಪದರದೊಳಗೆ ಪವನ್ ದೇಹ ಸಿಲಕಿತ್ತು, ಸುಮಾರು 2 ಗಂಟೆ ಕಾರ್ಯಾಚರಣೆ ಇದಾಗಿತ್ತು.
ಸ್ಥಳೀಯರಿಂದ ಅಲ್ಲಿನ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದು, ಶವ ಹೊರತೆಗೆದವು, ಮಂಡಿವರೆಗೂ ಮುಳುಗುವ ನೀರಿನಲ್ಲಿ ಹಗ್ಗ ಕಟ್ಟಿಕೊಂಡು ಹೊರ ತೆಗೆದಿದ್ದಾರೆ,.
ಇನ್ನು ಮತ್ತೊಂದು ಕಾರ್ಯಾಚರಣೆ ಮಕ್ಕಂದೂರು ಗ್ರಾಮದಲ್ಲಿ ಭಾರತೀಯ ಸೇನೆ ನಡೆಸಿದೆ, ಭೂ ಕುಸಿತದಿಂದ ಸಾವನ್ನಪ್ಪಿದ್ದ 2 ದೇಹಗಳನ್ನು ಹೊರೆ ತೆಗದಿದ್ದಾರೆ, ಚಂದ್ರಾವತಿ ಮತ್ತು ಆಕೆ ಪುತ್ರ ಉಮೇಶ್ ರೈ ಎಂಬುವರ ಶವಗಳಾಗಿವೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ವೈಮಾನಿಕ ,ಸಮೀಕ್ಷೆ ನಡೆಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos