ರಾಜ್ಯ

ಬೆಂಗಳೂರು: ರೌಡಿ ಶೀಟರ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ

Nagaraja AB

ಬೆಂಗಳೂರು: ನವೆಂಬರ್ 30 ರಂದು ಕೊತ್ತನೂರಿನಲ್ಲಿ ಬಾರ್ ವೊಂದರಲ್ಲಿ ಲಾರಿ ಚಾಲಕನನ್ನು ಕೊಲೆ ಮಾಡಿದ್ದ ಆರೋಪಿ 19 ವರ್ಷದ ರೌಡಿ ಶೀಟರ್ ಮೇಲೆ  ಹೆಣ್ಣೂರು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಗುಂಡೇಟಿನಿಂದ ಗಾಯಗೊಂಡಿರುವ ರೌಡಿ ಶೀಟರ್ ಅಭಿಷೇಕ್ ಹಾಗೂ ಕಾನ್ಸ್ ಟೇಬಲ್  ಸಂತೋಷ್ ಲಮಾಣಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಲೆ, ದರೋಡೆ ಸೇರಿದಂತೆ ಸೇರಿದಂತೆ ಹಲವಾರು ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಅಭಿಷೇಕ್  ಈ ಹಿಂದೆ ಕೊತ್ತನೂರು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಎನ್ನಲಾಗಿದೆ.

ವಡ್ಡರಪಾಳ್ಯ ನಿವಾಸಿಯಾದ ಅಭಿಷೇಕ್ ತನ್ನ ಸಹಚರರೊಂದಿಗೆ ಸೇರಿ  ಲಾರಿ ಚಾಲಕ ಕೇಶವ್ ಎಂಬವರನ್ನು ಹತ್ಯೆ ಮಾಡಿದ್ದರು.  ತಕ್ಷಣ ಆರೋಪಿಗಳನ್ನು ಬಂಧಿಸಲು ರಚಿಸಲಾಗಿದ್ದ ವಿಶೇಷ ತಂಡದಿಂದ  ಮೂವರನ್ನು ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿ ಆಧಾರದ ಮೇಲೆ ಇನ್ಸ್ ಪೆಕ್ಟರ್ ಹೆಚ್ ಡಿ ಕುಲಕರ್ಣಿ ನೇತೃತ್ವದಲ್ಲಿನ ತಂಡ ರೌಡಿ ಶೀಟರ್ ನನ್ನು ಬೆನ್ನತಿತ್ತು.
SCROLL FOR NEXT