ಸಂಗ್ರಹ ಚಿತ್ರ 
ರಾಜ್ಯ

ಬೆಲೆ ಕುಸಿತದ ಅಪಾಯದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕ ರೈತರು!

ಆಧುನಿಕ ವಿಧಾನಗಳನ್ನು ಅನುಸರಿಸಿ ಕೃಷಿ ಮಾಡಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಿ, ಮುಖದ ಮೇಲೆ ನಗು ತರಿಸಿಕೊಳ್ಳುವ ಕಾಲ ಬಹಳ ಹಿಂದೆಯೇ ಕಳೆದು ...

ಮೈಸೂರು: ಆಧುನಿಕ ವಿಧಾನಗಳನ್ನು ಅನುಸರಿಸಿ ಕೃಷಿ ಮಾಡಿ ಬೆಳೆದ ಬೆಳೆಗಳನ್ನು ಮಾರಾಟ ಮಾಡಿ, ಮುಖದ ಮೇಲೆ ನಗು ತರಿಸಿಕೊಳ್ಳುವ ಕಾಲ ಬಹಳ ಹಿಂದೆಯೇ ಕಳೆದು ಹೋಗಿದೆ, ಬಂಪರ್ ಬೆಳೆ ಬಂದ ಸಮಯದಲ್ಲಿ ಸರಿಯಾದ ಬೆಲೆ ಸಿಗದೇ ಉತ್ಪನ್ನಗಳ ಮಾರಾಟ ದರ ಪಾತಾಳಕ್ಕಿಳಿಯುತ್ತದೆ. 
ಹಣವನ್ನು ಸಾಲವನ್ನಾಗಿ ತಂದು, ಸಾಂಪ್ರಾದಾಯಿಕ ಅಥವಾ ವಾಣಿಜ್ಯ ಬೆಳೆ ಬೆಳೆಯುವ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ, ಬೆಳೆಯುವ ತರಕಾರಿ ಕೆಜಿ ಒಂದಕ್ಕೆ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಮೆಣಸಿನಕಾಯಿ ಕೆಜಿಗೆ 15 ರು, ಬೀನ್ಸ್ 17, ಬೀಟ್ ರೂಟ್ 9 ರು, ಗೆ ಮಾರಾಟವಾಗುತ್ತಿದೆ, 1 ಎಕರೆಗೆ 30 ಸಾವಿರ ರು ಖರ್ಚು ಮಾಡಿ ರೈತ ಬೀನ್ಸ್ ಬೆಳೆಯುತ್ತಾನೆ, ಆದರೆ  ಅವನಿಗೆ ಸಿಗುವುದು 15 ಸಾವಿರಕ್ಕಿಂತಲೂ ಕಡಿಮೆ ಹಣ,
ಇನ್ನೂ ಒಂದು ಎಕರೆಗೆ 40 ಸಾವಿರ ರೂ ಖರ್ಚು ಮಾಡಿ, ಎಲೆಕೋಸು ಬೆಳೆದರೆ ಅದಕ್ಕೆ ಸಿಗುವುಗು ಕೇವಲ 12 ಸಾವಿರ ರು ಮಾತ್ರ,  ಹೀಗಾಗಿ ನಷ್ಟವಾಗುವ ಸೂಚನೆ ಸಿಕ್ಕ ರೈತರು ಬೆಳೆಯನ್ನು ಕೊಯ್ಲು ಮಾಡುವ ಗೋಜಿಗೆ ಹೋಗುವುದಿಲ್ಲ, 
ತರಕಾರಿಗಳ ಬೆಲೆ ಮಾರುಕಟ್ಟೆಯಲ್ಲಿ ಎಷ್ಟಿರುತ್ತದೆ ಎಂಬುದನ್ನು ಪರೀಶೀಲಿಸಿ, ತಮಿಳುನಾಡಿನ ತಾಳವಾಡಿ ಮತ್ತು ಸತ್ಯಮಂಗಲ ಗಳಲ್ಲಿ ಸಂಕ್ರಾಂತಿ ಮತ್ತು ಕೇರಳದಲ್ಲಿ ಕ್ರಿಸ್ ಮಸ್ ಸಂದರ್ಭದಲ್ಲಿ  ಮಾರಾಟ ಮಾಡಲಾಗುತ್ತದೆ.
ಇದೇ ರೀತಿಯ ಬೆಲೆ ಏರಿಳಿತ ಬಾಳೆಹಣ್ಣು ಕೃಷಿಯಲ್ಲಿ ಇದೇ ರೀತಿಯ ವ್ಯತ್ಯಾಸವಾಗುತ್ತದೆ, ಏಲಕ್ಕಿ ಮತ್ತು ನೇಂದ್ರ ಬಾಳೆಹಣ್ಣಿನ ಬೆಲೆ ಪಾತಾಳಕ್ಕಿಳಿದಿದೆ. ಕೇವಲ ಹಣ್ಣು ಮತ್ತು ತರಕಾರಿ ಮಾತ್ರವಲ್ಲದೇ, ಹತ್ತಿ,  ಅರಿಶಿನ, ಬೆಂಡೇಕಾಯಿ ಸೇರಿದಂತೆ ಎಲ್ಲಾ  ತರಕಾರಿಗಳ ಬೆಲೆ ತೀರಾ ಇಳಿಮುಖವಾಗಿದೆ. 
ಮಂಡ್ಯ,ಮೈಸೂರು, ಚಾಮರಾಜನಗರ ಭಾಗಗಳಲ್ಲಿ ಕಬ್ಬು ಕಟಾವು ಮಾಡಿ,  ಸಕ್ಕರೆ ಕಾರ್ಖಾನೆ ಆವರಣಕ್ಕೆ ತಂದು ಹಾಕಲಾಗಿದೆ. ಶೇ.4 ರಷ್ಟು ಬಡ್ಡಿಗೆ ಸಾಲ ತಂದು ಬೆಳೆ ಬೆಳೆದರೇ ಮಾಡಿದ ಕೃಷಿಗೆ ಬೆಲೆಯಲ್ಲದೇ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

SCROLL FOR NEXT