ಬೆಂಗಳೂರು: ಪಾರಿವಾಳವನ್ನು ಹಾರಿ ಬಿಟ್ಟದ್ದಕ್ಕಾಗಿ ನೀಲಗಿರಿ ತೋಟದಲ್ಲಿ ಎರಡು ವರ್ಷದ ಮಗುವನ್ನು ಕೊಂದ 15 ವರ್ಷದ ಬಾಲಕನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಗುವನ್ನು ಕೊಂದು ಬಾಲಕ ಮನೆಗೆ ಹಿಂತಿರುಗುತ್ತಿದ್ದ.
ನಿಖರ ಮಾಹಿತಿ ಪಡೆದ ಪೊಲೀಸರು 8ನೇ ತರಗತಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನನ್ನು ಬಂಧಿಸಿದ್ದಾರೆ.
ಬಸವರಾಜ್ ಮತ್ತು ಯೆಂಕಮ್ಮ ಅವರ ಮಗುವಾದ ಎರಡು ವರ್ಷದ ವೆಂಕಟೇಶ್ ಬುಧವಾರ ಸಾಯಂಕಾಲ ಮೃತಪಟ್ಟಿರುವುದು ತಿಳಿದುಬಂತು. ಕೊಂದ ಬಾಲಕನೇ ವೆಂಕಟೇಶ್ ನ್ನು ಕೊನೆಯ ಸಲ ನೋಡಿದ್ದು ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅವನನ್ನು ಬಂಧಿಸಿದಾಗ ಪೊಲೀಸರ ಮುಂದೆ, ಕಳೆದೆರಡು ದಿನಗಳಿಂದ ತನ್ನ ಮೂರು ಪಾರಿವಾಳಗಳನ್ನು ಗೂಡಿನಿಂದ ಬಿಟ್ಟ ಕಾರಣ ಸಿಟ್ಟಿನಿಂದ ವೆಂಕಟೇಶ್ ನನ್ನು ಕೊಂದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಮಾರುತಿ ಲೇ ಔಟ್ ನಲ್ಲಿ ವಾಸಿಸುತ್ತಿರುವ ವೆಂಕಟೇಶ್ ಕುಟುಂಬ ರಸ್ತೆ ಬದಿ ಗಾಡಿಯಲ್ಲಿ ಉಪಹಾರ ಮಾರಾಟ ಮಾಡಿ ಜೀವನ ಸಾಗಿಸುತ್ತಿತ್ತು. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನವರಾದ ವೆಂಕಟೇಶ್ ತಮ್ಮ ಮೂವರು ಮಕ್ಕಳೊಂದಿಗೆ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ಎಂಟು ತಿಂಗಳ ಹಿಂದೆ ಬಂದಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos