ರಾಜ್ಯ

ಬಸವಕಲ್ಯಾಣದ ಅನುಭವ ಮಂಟಪಕ್ಕೆ ರಾಹುಲ್ ಗಾಂಧಿ ಭೇಟಿ

Nagaraja AB

ಬಸವಕಲ್ಯಾಣ: ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ, 4 ನೇ ದಿನದ ಪ್ರವಾಸದಲ್ಲಿ ಇಂದು ಬೀದರ್  ಜಿಲ್ಲೆ ಬಸವ ಕಲ್ಯಾಣದಲ್ಲಿನ ಅನುಭವ ಮಂಟಪಕ್ಕೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು.


 ನಂತರ ಮಾತನಾಡಿದ ಅವರು ಕ್ರಾಂತಿಕಾರಿ ಬಸವಣ್ಣನ ತತ್ವಗಳು ಇಡೀ ವಿಶ್ವಕ್ಕೆ ತಾರಕಮಂತ್ರವಾಗಿದೆ. ಇದರ ಪಾಲನೆಯಿಂದ ಬದುಕು ಹಸನಾಗುವುದು ಎಂದರು.

ಮಹಾತ್ಮಾಗಾಂಧೀಜಿ ಮತ್ತು ಬಸವಣ್ಣನವರ ತತ್ವ ಒಂದೇ ಆಗಿದೆ. ಬಸವತತ್ವದ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುತ್ತೇನೆ ಎಂದರು.



SCROLL FOR NEXT