ಬಂದೂಕಿನ (ಸಾಂದರ್ಭಿಕ ಚಿತ್ರ) 
ರಾಜ್ಯ

ಶಿವಾಜಿ ಜಯಂತಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಕಾರ್ಪೋರೇಟರ್

ಇಲ್ಲಿನ ಶಿವಾಜಿ ವೃತ್ತದಲ್ಲಿ ಶಿವಾಜಿ ಜಯಂತಿ ಆಚರಣೆ ವೇಳೆ ಕಾಂಗ್ರೆಸಿನ ನಾಮನಿರ್ದೇಶಿತ ಕಾರ್ಪೋರೇಟರ್ ಮಂಜುನಾಥ್ ಕದಮ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಧಾರವಾಡ: ಇಲ್ಲಿನ ಶಿವಾಜಿ ವೃತ್ತದಲ್ಲಿ ಶಿವಾಜಿ ಜಯಂತಿ ಆಚರಣೆ ವೇಳೆ ಕಾಂಗ್ರೆಸಿನ ನಾಮನಿರ್ದೇಶಿತ ಕಾರ್ಪೋರೇಟರ್  ಮಂಜುನಾಥ್ ಕದಮ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಜಯಂತೋತ್ಸವದಲ್ಲಿ ಮೈ ಮರೆತಿದ್ದ  ಮಂಜುನಾಥ್ ಕದಂ ತಮ್ಮ ಬಂದೂಕಿನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ . ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತವಾರಣ ಸೃಷ್ಟಿಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಆತನಿಂದ ಬಂದೂಕು ಪಡೆದು ವಿಚಾರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂದೂಕು ಪರವಾನಗಿ ಹೊಂದಿದ್ದು, ಘಟನೆ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಉದ್ದೇಶಪೂರ್ವಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ತಪಿತಸ್ಥರು ಎಂದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎಂ. ಎನ್. ನಾಗರಾಜ್ ತಿಳಿಸಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran war: 4 ಬಾರಿ ಆಂತರಿಕ ವ್ಯವಹಾರದಲ್ಲಿ khameni ಹಸ್ತಕ್ಷೇಪ!; "ಮೌನವಾಗಿರಬೇಡಿ" ಎಂದಿದ್ದ ಇರಾನ್ ಆಗ್ರಹಕ್ಕೆ ಮೌನ ಮುರಿದ PM ಮೋದಿ ಹೇಳಿದ್ದಿಷ್ಟು...

ಭಾರತದಲ್ಲಿ ಹಿಂಸಾಚಾರ ಸಾಧ್ಯತೆ: ದ್ವೇಷಕಾರಿ ಧರ್ಮೋಪದೇಶ ನೀಡುವವರ ಮೇಲೆ ನಿಗಾ ಇರಿಸಿ; ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಕೆನಡಾ ಪ್ರಧಾನಿ ಕಾರ್ನಿಯೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ; ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ

ಕುವೈತ್ ನಲ್ಲಿ ಅಮೆರಿಕಾದ ಬಲಿಷ್ಠ F15 ಹೊಡೆದುರುಳಿಸಿದ ಇರಾನ್?

ಅಮೆರಿಕ ಎದುರು ಶರಣಾಯ್ತಾ ಇರಾನ್?: ಒಮಾನ್ ಮಧ್ಯಸ್ಥಿಕೆ: ಈ ಬಗ್ಗೆ ಇರಾನ್ ಹೇಳಿದ್ದೇನು?

SCROLL FOR NEXT