ಸನ್ನಿ ಲಿಯೋನ್, 
ರಾಜ್ಯ

ಬೆಂಗಳೂರು: ಹೊಸ ವರ್ಷಾಚರಣೆಗಿಲ್ಲದ 'ಸನ್ನಿ ನೈಟ್ಸ್' ಫೆಬ್ರವರಿಯಲ್ಲಿ ಆಯೋಜನೆ

ಹೊಸ ವರ್ಷಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಸುರಕ್ಷತಾ ದೃಷ್ಟಿಯಿಂದ ನಗರ ಪೋಲೀಸರು ಅವಕಾಶ ನೀಡೀರಲಿಲ್ಲ.

ಬೆಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಸುರಕ್ಷತಾ ದೃಷ್ಟಿಯಿಂದ ನಗರ ಪೋಲೀಸರು ಅವಕಾಶ ನೀಡೀರಲಿಲ್ಲ. ಇದು ಕೆಲವಷ್ಟು ಜನರಿಗೆ ಬೇಸರ ತರಿಸಿದ್ದು ಸುಳ್ಳಲ್ಲ. ಆದರೆ ಇದೀಗ ಅಂದು ನಿಷೇಧಕ್ಕೊಳಗಾದ ಸನ್ನಿ ಲಿಯೋನ್ ಕಾರ್ಯಕ್ರಮವು ಫೆಬ್ರವರಿಯಲ್ಲಿ ನಡೆಯಲಿದೆ ಎಂಡು ವರದಿಯಾಗಿದೆ.
ಕಾರ್ಯಕ್ರಮ ಆಯೋಜಕರಾದ ಟೈಮ್ ಕ್ರಿಯೇಷನ್ಸ್ ನ ವ್ಯವಸ್ಥಾಪಕಹರೀಶ್ ಅವರು ಎಕ್ಸ್ದ್ ಪ್ರೆಸ್ ಗೆ ಈ ವಿಚಾರ ತಿಳಿಸಿದ್ದು ಇದೇ ವಾರದಲ್ಲಿ ನಿಗದಿತ ಕಾರ್ಯಕ್ರಮಾಕ್ಕೆ ಸರ್ಕಾರದಿಂದ ಅನುಇಮತಿ ದೊರಕುವ ಭರವಸೆ ವ್ಯಕ್ತಪಡಿಸಿದ್ದಾರೆ.
ಸನ್ನಿ ಲಿಯೋನ್ ಕಾರ್ಯಕ್ರಮವು ಕನ್ನಡ ಸಂಸ್ಕೃತಿಗೆ ಒಗ್ಗುವಂತಹುದಲ್ಲ ಎನ್ನುವ ಕಾರಣಕ್ಕೆ ಕನ್ನಡ ಪರ ಸಂಘಟನೆಗಳು ಹೊಸ ವರ್ಷಾಚರಣೆಗೆ ಸನ್ನಿ ಲಿಯೋನ್ ಕಾರ್ಯಕ್ರಮ ನೀಡುವುದನ್ನು ವಿರೋಧಿಸಿದ್ದವು. ಬೆಂಗಳೂರು ಪೋಲೀಸ್ರಉ, ಸರ್ಕಾರ ಸಹ ಸನ್ನಿ ಲಿಯೋನ್ ಕಾರ್ಯಕ್ರಮ ನಡೆದರೆ ನಗರದ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಒದಗುವುದೆಂದು ಹೇಳಿ ಕಾರ್ಯಕ್ರಮಕ್ಕೆ ತಡೆ ಹಾಕಿದ್ದರು. ಇದನ್ನು ಪ್ರಶ್ನಿಸಿ ಕಾರ್ಯ್ಕ್ರ್ಮ ಆಯೋಜಕರು ಹೈ ಕೋರ್ಟ್ ಮೊರೆ ಹೋಗಿದ್ದರು.
ಕಾರ್ಯಕ್ರಮಕ್ಕಾಗಿ ಲಂಚ?
ಫೆಬ್ರವರಿಯಲ್ಲಿ ನಡೆಯುವ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಬಾರದು ಎಂದರೆ ತಮಗೆ ಹಣ ನೀಡಬೇಕೆಂದು ಕನ್ನಡ ಸಂಘಟನೆ ಮುಖ್ಯಸ್ಥರು ಕಾರ್ಯಕ್ರಮ ಆಯೋಜಕರಿಗೆ ಹಣದ ಬೇಡಿಕೆ ಇಟ್ಟಿದ್ದು ಅವರಿಂದ ಲಂಚ ಸ್ವೀಕರಿಸಿದ್ದಾರೆ ಎನ್ನುವ ಆರೋಪವೊಂದು ಕೇಳಿಬಂದಿದೆ.
ಪ್ರಮುಖ ಟಿವಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ಂಆಹಿತಿ ಬಹಿರಂಗವಾಗಿದ್ದು ಅದರಲ್ಲಿ ಪ್ರಸಾರವಾದ ವೀಡಿಯೋ ದೃಶ್ಯದಲ್ಲಿ "ನಮ್ಮ ಕಾರ್ಯಕರ್ತರು ನಾವು ಹೇಳಿದರೆ ಮಾತ್ರವೇ ಪ್ರತಿಭಟನೆ ನಡೆಸುತ್ತಾರೆ. ನೀವು ನಮ್ಮ ಬಾಸ್ ಗೆ `40 ಲಕ್ಷ ರೂ. ನೀಡಿ ಪೋಲೀಸರಿಂದ ಒಪ್ಪಿಗೆ ಪಡೆದುಕೊಂಡು ಬಂಡಲ್ಲಿ ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ" ಕನ್ನಡ ಸಂಘಟನೆಯವರ ಹೇಳಿಕೆ ದಾಖಲಾಗಿದೆ. ಆದರೆ ಇದೆಲ್ಲವೂ ಕನ್ನಡ ಸಂಘಟನೆಗಳ ಹೆಸರಿಗೆ ಮಸಿ ಬಳಿಯುವ ಕೆಲಸ, ಇದು ನಕಲಿ ವೀಡಿಯೋ ಎಂಡು ಕನ್ನಡ ಸಂಘಟನೆ ಪ್ರಮುಖರು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT