ರಾಜ್ಯ

ರಾಮನಗರ: ಗಂಟಲಿಗೆ ಆಹಾರ ಸಿಕ್ಕಿ ಮೂರು ತಿಂಗಳ ಮಗು ಸಾವು

Raghavendra Adiga
ರಾಮಗರ: ಮಗುವಿಗೆ ತಿನ್ನಿಸಿದ ಆಹಾರವೇ ಗಂಟಲಿನಲ್ಲಿ ಸಿಲುಕಿ ಮೂರು ತಿಂಗಳ ಮಗುವೊಂದು ಮೃತಪಟ್ಟ ಘಟನೆ ರಾಮನಗರದಲ್ಲಿ ನಡೆದಿದೆ.
ಮಾಗಡಿ ತಾಲೂಕಿನ ಹೊಸಪಾಳ್ಯದ ಮಂಜುನಾಥ್ ಹಾಗೂ ಧನಲಕ್ಷ್ಮೀ ದಂಪತಿಯ ಹೆಣ್ಣು ಮಗು ಸಾವನ್ನಪ್ಪಿದ್ದು ಇವರು ಕಳೆದ ಹದಿನೈದು ದಿನಗಳಿಂದ ಮಗುವಿಗೆ ಮಣ್ಣಿ ರೂಪದ ಆಹಾರ ತಿನ್ನಿಸುತ್ತಿದ್ದರು.
ಆದರೆ ಇಂದು ಬೆಳಗ್ಗೆ ಸಹ ಆಹಾರ ತಿನ್ನಿಸುವ ವೇಳೆ ಗಂಟಲಲ್ಲಿ ಸಿಲುಕ್ಜಿದ ಪರಿಣಾಮ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೂ ಆಸ್ಪತ್ರೆಗೆ ತಲುಪುವ ಮಾರ್ಗದ ನಡುವೆಯೇ ಮಗು ಪ್ರಾಣ ಬಿಟ್ಟಿದೆ. ಆಸ್ಪತ್ರೆಯಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿಗೆ ನೀಡಿದ್ದ ಆಹಾರ ಗಂಟಲಲ್ಲಿ ಸಿಲುಕಿದ ಪರಿಣಾಮವೇ ಸಾವಿಗೀಡಾಗಿರುವುದಾಗಿ ಹೇಳಿದ್ದಾರೆ.
ಮಗುವಿನ ಸಾವಿನ ಕಾರಣ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
SCROLL FOR NEXT