ರಾಜ್ಯ

ದಾವಣಗೆರೆ: ಗರ್ಲ್ ಫ್ರೆಂಡ್ ಸ್ನೇಹಿತನ ಮೇಲೆ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರ ಹಲ್ಲೆ

Sumana Upadhyaya

ದಾವಣಗೆರೆ: ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್ ಪುತ್ರ ತನ್ನ ಗೆಳತಿಯ ಸ್ನೇಹಿತನಿಗೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಾವಣಗೆರೆ ಪಾಲಿಕೆಯ ಕಾರ್ಪೊರೇಟರ್ ಲಿಂಗರಾಜು ಅವರ ಪುತ್ರ ರಾಕೇಶ್ ಈ ಕೃತ್ಯವೆಸಗಿದ್ದಾನೆ. ಈತ ತನ್ನ ಗರ್ಲ್ ಫ್ರೆಂಡ್ ಜೊತೆ ಆತ್ಮೀಯವಾಗಿದ್ದ ಯುವಕನ ಮೇಲೆ ಆಕ್ರೋಶದಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಗೀಡಾದ ಯುವಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಪೊಲೀಸರು ಪ್ರಕರಣ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ.

SCROLL FOR NEXT