ವಿಜಯಪುರ: ಭೀಮಾ ತೀರದ ಹಂತಕ ಗಂಗಾಧರ ಚಡಚಣ ಕೊಲೆ ಆರೋಪಿ ಸಿದ್ದಗೊಂಡಪ್ಪ ಮುಡವೆ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕರಣದಲ್ಲಿ ಬಂಧಿಯಾಗಿರುವ ಸಿದ್ದಗೊಂಡಪ್ಪ ಅವರ ಪತ್ನಿ ಕಾಂಚಾನ ಇಂಡಿ ತಾಲೂಕಿನ ಧೂಳಖೇಡ ಬಳಿ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಾಸವಾಗಿದ್ದ ಕಾಂಚಾನ ಕೆಲವು ದಿನಗಳಿಂದ ಅವರ ತವರೂರು ಇಂಡಿಯ ಕೆರೂರು ಗ್ರಾಮದಲ್ಲಿ ವಾಸವಿದ್ದರು. ಪತಿ ಸಿದ್ದಗೊಂಡಪ್ಪ ತಾನು ಎರಡು ದಿನಗಳ ಹಿಂದಷ್ಟೇ ನ್ಯಾಯಾಲಯಕ್ಕೆ ಶರಣಾಗಿದ್ದು ಗಂಗಾಧರ್ ಹತ್ಯೆ ಸಂಬಂಧ ಆತನ ವಿಚಾರಣೆ ನಡೆಯುತ್ತಿದೆ. ಇದರಿಂದ ಮನನೊಂದ ಕಾಂಚಾನ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಹತ್ತು ವರ್ಷಗಳ ಹಿಂದೆ ಸಿದ್ದಗೊಂಡಪ್ಪ ಅವರನ್ನು ವಿವಾಹವಾಗಿದ್ದ ಈಕೆ ಅನಾರೋಗ್ಯಪೀಡಿತರಾಗಿದ್ದರೆಂದು ಹೇಳಲಾಗಿದೆ.
ಜಳಕಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.