ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಉಮೇಶ್ ಜಾಧವ್ 
ರಾಜ್ಯ

ಕಾರ ಹುಣ್ಣಿಮೆ ಸಂಭ್ರಮಾಚರಣೆ ವೇಳೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಗೆ ಗಾಯ

ಕಾರಹುಣ್ಣಿಮೆ ಸಂಭ್ರಮಾಚರಣೆ ವೇಳೆ ವೇಗವಾಗಿ ಬಂದ ಬಂಡಿ ಶಾಸಕ ಡಾ.ಉಮೇಶ್ ಜಾಧವ್ ಕಾಲು ಮೇಲೆ ಹಾಯ್ದ ಪರಿಣಾಮ ಶಾಸಕರು ಗಾಯಗೊಂಡಿರುವ ...

ಕಲಬುರಗಿ: ಕಾರಹುಣ್ಣಿಮೆ ಸಂಭ್ರಮಾಚರಣೆ ವೇಳೆ ವೇಗವಾಗಿ ಬಂದ ಬಂಡಿ ಶಾಸಕ ಡಾ.ಉಮೇಶ್ ಜಾಧವ್ ಕಾಲು ಮೇಲೆ ಹಾಯ್ದ ಪರಿಣಾಮ ಶಾಸಕರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
ಚಿಂಚೋಳಿ ಶಾಸಕರಾಗಿರುವ ಉಮೇಶ್ ಜಾಧವ್, ಚಿಂಚೋಳಿ ಪಟ್ಟಣದಲ್ಲಿ ನಡೆದ ಕಾರ ಹುಣ್ಣಿಮೆ ಉತ್ಸವದಲ್ಲಿ ಪಾಲ್ಗೊಂಡಿದ್ದರು.  ಮೊದಲು ಪೂಜೆ ಸಲ್ಲಿಸಿ  ಚಕ್ಕಡಿ ಓಡಿಸಿ ಸಂಭ್ರಮಿಸಿದ ಜಾಧವ್, ನಂತರ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದರು, ಈ ವೇಳೆ ವೇಗವಾಗಿ ಒಡಿ ಬಂದ ಎತ್ತಿನ ಬಂಡಿ ನಿಂತಿದ್ದ ಗುಂಪಿನ ಮೇಲೆ ನುಗ್ಗಿದೆ.
ಈ ವೇಳೆ ಉಮೇಶ್ ಜಾಧವ್ ಅವರ ಮೇಲೆ ಬಂಡಿ ಹಾಯ್ದಿದ್ದು, ಬಲಗಾಲು ಮತ್ತು ಭುಜಕ್ಕೆ ಗಾಯಗಳಾಗಿವೆ. ಸ್ವಲ್ಪದರಲ್ಲಿಯೇ ಜಾಧವ್ ಅವರು, ಭಾರಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇನ್ನೂ ಇಬ್ಬರಿಗೆ ಗಾಯಗಳಾಗಿವೆ. 
ಇದೇ ವೇಳೆ ಎತ್ತಿನ ಬಂಡಿ ಮೇಲಿಂದ ಬಿದ್ದು 35 ವರ್ಷದ ರಾಜು ಚೌಹಾನ್ ಎಂಬಾತ ಮೃತ ಪಟ್ಟಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT