ರಾಜ್ಯ

ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ದಂಪತಿ ಸಾವು

Raghavendra Adiga
ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಬೆಂಕಿ ಅನಾಹುತಕ್ಕೆ ಸಿಕ್ಕು ದಂಪತಿಗಳು ಸಜೀವ ದಹನವಾದ ಘಟನೆ ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ನಡೆದಿದೆ.
ಮಾನ್ವಿಯ ಅಮರೇಶ್ವರ  ಕ್ಯಾಂಪ್‌ ನಲ್ಲಿ ಸಂಭವಿಸಿದ ಈ ಘತಣೆಯಲ್ಲಿ  ಪ್ರಕಾಶ್(55 ), ಕೃಷ್ಣವೇಣಿ (50)  ದಂಪತಿ ಸಾವನ್ನಪ್ಪಿದ್ದಾರೆ. 
ಶನಿವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು ಮಲಗಿದ್ದ ದಂಪತಿಗಳು ಮಲಗಿದ್ದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಸಧ್ಯ ಮಾನ್ವಿ ಪೋಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾನ್ವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SCROLL FOR NEXT