ಬಿಎಸ್ ಯಡಿಯೂರಪ್ಪ 
ರಾಜ್ಯ

ಕುಮಾರಸ್ವಾಮಿ ಸಿಎಂ ಆಗಿರುವುದು ಕನ್ನಡ ಜನರ ಸೇವೆಗೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ: ಬಿಎಸ್ ವೈ

"ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ ಎನ್ನುವುದನ್ನು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ

ಬೆಂಗಳೂರು: "ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ ಎನ್ನುವುದನ್ನು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ ಅವರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ" ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡ್ದ್ದ ರಾಜ್ಯ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು."ನಾನು ಕರ್ನಾಟಕದ ಜನರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎನ್ನುವ ಅವರ ಹೇಳಿಕೆ ನಾಡಿನ ಜನತೆಗೆ ಮಾಡಿದ ಅಪಚಾರ. ಹೀಗಾಗಿ ಅವರು ಯಾವ ಮುಲಾಜು ಇಲ್ಲದೆ ಜನರ ಕ್ಷಮೆಯಾಚಿಸಲಿ. " ಎಂದರು.
"ರೈತರ ಸಾಲಮನ್ನಾಸಂಬಂಧ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಅವರು ಸಾಲಮನ್ನಾಗೆ ಒಂದು ವಾರದ ಕಾಲಾವಧಿ ಕೇಳಿದ್ದಾರೆ.ಒಂದು ವಾರ ಕಾಯುತ್ತೇವೆ, ಬಳಿಕ ಮತ್ತೆ ಹೋರಾಟ ನಡೆಸಲಿದ್ದೇವೆ." ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಂಗಳೂರು ಹೊರತು ರಾಜ್ಯದೆಲ್ಲೆಡೆ ಬಂದ್ ಯಶಸ್ವಿಯಾಗಿದೆ. ಬಂದ್ ಗಾಗಿ ಯಾವ ಸಂಘಟನೆಗಳ ಬೆಂಬಲ ಕೋರಿರಲಿಲ್ಲ. ಸರ್ಕಾರ ಬಂದ್ ಮಾಡದೆ ಇರಲು ಪೋಲೀಸರನ್ನು ಬಳಸಿದೆ, ಬಿಜೆಪಿಯ ಸಂಸದರು, ಶಾಸಕರನ್ನು ಬಂಧಿಸಲಾಗಿದೆ. ಹಾಗಾದರೆ ಈ ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೂ ಅವಕಾಶವಿಲ್ಲದೆ ಹೋಗಿದೆಯೆ? ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT