ರಾಜ್ಯ

ಕಾವೇರಿ ಸಂಗಮದಲ್ಲಿ ಲೀನವಾದ ಕರುನಾಡ 'ಕರ್ಣ': ಶಾಸ್ತ್ರೋಕ್ತವಾಗಿ ಅಸ್ಥಿ ವಿಸರ್ಜಿಸಿದ ಕುಟುಂಬಸ್ಥರು

Manjula VN
ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಷ್ ಅವರ ಚಿತಾಭಸ್ಮವನ್ನು ಬುಧವಾರ ಅಂಬಿಯವರ ಕುಟುಂಬಸ್ಥರು ಶ್ರೀರಂಗಪಟ್ಟಣದ ತ್ರಿವೇಣಿ ಸಂಗಮದಲ್ಲಿ ಶಾಸ್ತ್ರೋಕ್ತ ಪೂಜೆಗಳೊಂದಿಗೆ ವಿಸರ್ಜನೆ ಮಾಡಿದರು. 
ಇಂದು ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಅಸ್ಥಿ ಸಂಗ್ರಹಿಸಿ, ಹಾಲು-ತುಪ್ಪ ಕಾರ್ಯ ನಡೆಸಲಾಗಿದ್ದು, ಬಳಿಕ ಅಲ್ಲಿಂದ ಅಂಬಿ ಕುಟುಂಬಸ್ಥರು ಮಂಡ್ಯದ ಶ್ರೀರಂಗಪಟ್ಟಣಕ್ಕೆ ಅಸ್ಥಿಯನ್ನು ತಂದರು. 
ಬಳಿಕ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರು ಚಿತಾಭಸ್ಮವನ್ನು ಹಿಡಿದು ಕಾವೇರಿ ದಡಕ್ಕೆ ತಂದ ವಿಸರ್ಜನೆ ಮಾಡಿದರು. ಅಂಬರೀಷ್ ಅವರ ಪತ್ನಿ ಸುಮಲತಾ, ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ಮುನಿರತ್ನ, ಹಿರಿಟ ನಟ ದೊಡ್ಡಣ್ಣ ಸೇರಿದಂತೆ ಇತರರು ಚಿತಾಭಸ್ಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 
SCROLL FOR NEXT