ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ವೀಕೆಂಡ್ ಟೈಂಪಾಸ್ ಗೆ ಜೊತೆಯಾದ ಮಹಿಳೆಯಿಂದ 2 ಲಕ್ಷ ರೂ. ಬೆಲೆಯ ಚಿನ್ನ ಕಳ್ಳತನ!

ರಾತ್ರಿ ವೇಳೆ ಕೋಣೆಗೆ ಬರಮಾಡಿಕೊಂಡ ಮಹಿಳೆ ಚಿನ್ನಾಭರಣದೊಂದಿಗೆ ಪರಾರಿಯಾದ...

ಬೆಂಗಳೂರು: ರಾತ್ರಿ ವೇಳೆ ಕೋಣೆಗೆ ಬರಮಾಡಿಕೊಂಡ ಮಹಿಳೆ ಚಿನ್ನಾಭರಣದೊಂದಿಗೆ ಪರಾರಿಯಾದ ಘಟನೆ ನಗರದಲ್ಲಿ ಕಳೆದ ಶನಿವಾರ ನಡೆದಿದೆ.

ಸೂರ್ಯ (ಹೆಸರು ಬದಲಿಸಲಾಗಿದೆ) ಎಂಬ 29 ವರ್ಷದ ಯುವಕ ಖಾಸಗಿ ಕಂಪೆನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಕಳೆದ ಶನಿವಾರ ರಾತ್ರಿ ವೇಶ್ಯೆಯೊಬ್ಬಳನ್ನು ತನ್ನ ಕೋಣೆಗೆ ಬರಮಾಡಿಕೊಂಡಿದ್ದ. ಮೊದಲೇ ಮಾತಾಡಿಕೊಂಡಂತೆ ಆಕೆಯನ್ನು ಗುಂಜೂರು ರಸ್ತೆಯಲ್ಲಿ ತನ್ನ ಗಾಡಿಯಲ್ಲಿ ಹತ್ತಿಸಿಕೊಂಡು ವರ್ತೂರಿನಲ್ಲಿರುವ ಗುಂಜೂರು ಪಾಳ್ಯದಲ್ಲಿರುವ ಫ್ಲಾಟ್ ಗೆ ಕರೆದುಕೊಂಡು ಹೋಗಿದ್ದ.

ಶನಿವಾರ ರಾತ್ರಿ 9.30ರ ಸುಮಾರಿಗೆ ಫ್ಲಾಟ್ ಗೆ ಹೋಗಿದ್ದರು. ಸ್ವಲ್ಪ ಹೊತ್ತಿನವರೆಗೆ ಇಬ್ಬರೂ ಚೆನ್ನಾಗಿ ಮದ್ಯ ಸೇವಿಸಿದ್ದರು. ಯುವಕನಿಗೆ ಅಧಿಕ ಮದ್ಯ ಸೇವಿಸಿದ್ದರಿಂದ ಮಂಪರು ಬಂದು ನಿದ್ದೆಗೆ ಜಾರಿದ್ದ. ಎಚ್ಚರವಾದಾಗ ಮಧ್ಯರಾತ್ರಿ 2 ಗಂಟೆ. ಎದ್ದು ನೋಡಿದಾಗ ಅಲ್ಲಿ ಮಹಿಳೆ ಇರಲಿಲ್ಲ. ಎದ್ದು ಸುತ್ತಮುತ್ತ ನೋಡಿದಾಗ ಆಕೆ ಪರಾರಿಯಾಗಿದ್ದಾಳೆ ಎಂದು ಗೊತ್ತಾಯಿತು. ಯುವಕ ತನ್ನ ಕುತ್ತಿಗೆಯಿಂದ ಬಿಚ್ಚಿ ಹಾಸಿಗೆ ಪಕ್ಕದಲ್ಲಿ ಇಟ್ಟಿದ್ದ ಸುಮಾರು 2 ಲಕ್ಷ ಬೆಲೆಬಾಳುವ 55 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಳು. ಈ ಬಗ್ಗೆ ಸೂರ್ಯ ಮರುದಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಪೊಲೀಸರು ಸೆಕ್ಷನ್ 380ರಡಿಯಲ್ಲಿ ಕೇಸು ದಾಖಲಿಸಿ ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರಂಭದಲ್ಲಿ ಕಳವು ಹೇಗಾಯಿತು ಎಂದು ಯುವಕ ಹೇಳಲು ನಿರಾಕರಿಸಿದನಂತೆ. ಕೊನೆಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ನಡೆದ ಘಟನೆಯನ್ನು ಒಪ್ಪಿಕೊಂಡನು. ಆಕೆಯ ದೂರವಾಣಿ ಸಂಖ್ಯೆ ಬಿಟ್ಟು ಆತನಲ್ಲಿ ಬೇರೇನೂ ವಿವರಗಳಿಲ್ಲ.

ಎಸ್ಕಾರ್ಟ್ ಸರ್ವಿಸ್ ನಲ್ಲಿ ಪ್ರಕಟವಾದ ಜಾಹಿರಾತು ಮೂಲಕ ವೆಬ್ ಸೈಟ್ ನಲ್ಲಿ ಮಹಿಳೆಯ ವಿವರಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ.  ಆರೋಪಿ ಮಹಿಳೆಯನ್ನು ಪತ್ತೆ ಹಚ್ಚಿದ ಕೂಡಲೇ ಎಸ್ಕಾರ್ಟ್ ಸರ್ವಿಸ್ ನಡೆಯುತ್ತಿರುವವರನ್ನು ಕೂಡ ಪತ್ತೆಹಚ್ಚಿ ಬಂಧಿಸಲಿದ್ದೇವೆ ಎಂದು ಪೊಲೀಸರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT