ರಾಜ್ಯ

ಬೆಂಗಳೂರು: ಜ.18ರಿಂದ ನಗರದಲ್ಲಿ ನಡೆಯಲಿದೆ 'ಸಿರಿಧಾನ್ಯ ಮೇಳ'

Manjula VN
ಬೆಂಗಳೂರು: ಕೃಷಿ ಇಲಾಕೆ ವತಿಯಿಂದ 'ಸಾವಯವ ಮತ್ತು ಸಿರಿಧಾನ್ಯ ಅಂತರಾಷ್ಟ್ರೀಯ ಮೇಳ-2019' ಜ.18 ರಿಂದ 20ರವರೆಗೆ 3 ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. 
ಈ ಬಾರಿಯ ಸಿರಿಧಾನ್ಯ ಮೇಳದಲ್ಲಿ 250ಕ್ಕೂ ಹೆಚ್ಚು ಪ್ರದರ್ಶಕರು ಭಾಗವಿಸಲಿದ್ದಾರೆ. ಸುಮಾರು 12,000 ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ. 
ರಾಜ್ಯದ ಜೊತೆ ಜೊತೆಗೆ ಹೊರರಾಜ್ಯ ಪಾಲುದಾರರು ಹಾಗೂ ರಾಜ್ಯದ ಪ್ರಾದೇಶಿಕ ಸಾವಯವ ಕೃಷಿಕರ ಒಕ್ಕೂಟಗಳು, ರೈತ ಉತ್ಪಾದಕರ ಸಂಘಗಳು, ರೈತರ ಮಳಿಗೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 
ಕಳೆದ ಬಾರಿಯ ಮೇಳದಲ್ಲಿ ರೈತರು, ವಿದ್ಯಾರ್ಥಿಗಳು, ವಿಜ್ಞಾನಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಒಟ್ಟು 1 ಲಕ್ಷ ಜನರು ಪಾಲ್ಕೊಂಡಿದ್ದರು ಎಂದು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ. 
SCROLL FOR NEXT