ಸಾಂದರ್ಭಿಕ ಚಿತ್ರ 
ರಾಜ್ಯ

ವಿದೇಶ ಪ್ರವಾಸ ಹೋಗುವ ಉಪನ್ಯಾಸಕರೇ, ಇಲ್ಲಿದೆ ನಿಮಗೊಂದು ಸಿಹಿ ಸುದ್ದಿ

ಇನ್ನು ಮುಂದೆ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರು ವಿದೇಶಿ ಪ್ರವಾಸ ಹೋಗಲು ...

ಬೆಂಗಳೂರು: ಇನ್ನು ಮುಂದೆ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರು ವಿದೇಶಿ ಪ್ರವಾಸ ಹೋಗಲು ಸರ್ಕಾರದಿಂದ ಅನುಮತಿ ಸಿಗಲು ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ.
 
ರಾಜ್ಯ ಸರ್ಕಾರ ವಿದೇಶಿ ಪ್ರವಾಸಕ್ಕೆ ಹೋಗುವ ಉಪನ್ಯಾಸಕರ ಅರ್ಹತೆಯನ್ನು ಸಡಿಲಗೊಳಿಸಿ ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಮಟ್ಟದ ಅಧಿಕಾರಿಗಳಿಗೆ ಅನುಮತಿ ನೀಡುವ ಕೆಲಸವನ್ನು ನೀಡಿದೆ.

ಸರ್ಕಾರದಿಂದ ಅನುಮತಿ ಪತ್ರ ಬರಲು ತಡವಾಗಿ ವಿದೇಶಿ ಪ್ರವಾಸವನ್ನು ರದ್ದುಪಡಿಸಿದ ಉದಾಹರಣೆಗಳು ಸಾಕಷ್ಟು ಇವೆ. ಈ ಹಿಂದೆ ಸರ್ಕಾರ ಮಟ್ಟದಲ್ಲಿ ಅನುಮತಿ ಸಿಗಲು ಪ್ರಕ್ರಿಯೆಗೆ ಬಹಳ ಸಮಯ ಹಿಡಿಯುತ್ತಿದ್ದರಿಂದ ತಿಂಗಳುಗಟ್ಟಲೆ ಕಾಯಬೇಕಾಗುತ್ತಿತ್ತು. ಇದರಿಂದ ಕೊನೆ ಕ್ಷಣದಲ್ಲಿ ಉಪನ್ಯಾಸಕರ ಪ್ರವಾಸ ರದ್ದಾದ ಪ್ರಕರಣಗಳು ಇವೆ.

ಇನ್ನು ಮುಂದೆ ಎಲ್ಲವೂ ಆಯುಕ್ತರ ಮಟ್ಟದಲ್ಲಿ ನಡೆಯಲಿರುವುದರಿಂದ ಒಂದು ವಾರದಿಂದ 10 ದಿನಗಳ ಕಾಲದಲ್ಲಿ ಈ ಪ್ರಕ್ರಿಯೆಗಳು ಮುಗಿದುಹೋಗಬಹುದು ಎಂದು ಖುಷಿಯಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಟಿ ಎಂ ಮಂಜುನಾಥ್.

ಇತ್ತೀಚೆಗೆ ಬೆಂಗಳೂರಿನ ಆರ್ ಸಿ ಕಾಲೇಜಿನ ಹಿರಿಯ ಪ್ರೊಫೆಸರ್ ಒಬ್ಬರು ಸರ್ಕಾರದಿಂದ ತಡವಾಗಿ ಅನುಮತಿ ಸಿಕ್ಕಿದ್ದರಿಂದ ತಮ್ಮ ವಿದೇಶಿ ಪ್ರವಾಸವನ್ನು ಅನಿವಾರ್ಯವಾಗಿ ರದ್ದುಪಡಿಸಿ 80 ಸಾವಿರ ರೂಪಾಯಿ ಕಳೆದುಕೊಳ್ಳಬೇಕಾಯಿತು. ''ಅದು ನಮ್ಮ ಕುಟುಂಬದ ಪ್ರವಾಸವಾಗಿರಲಿಲ್ಲ, ಕೆನಡಾದಲ್ಲಿ ಸಮ್ಮೇಳನವೊಂದರಲ್ಲಿ ಭಾಗವಹಿಸುವ ಅಧಿಕೃತ ಪ್ರವಾಸವಾಗಿತ್ತು. ಅಗತ್ಯ ವಿವರಗಳನ್ನು ನಾನು ಸಲ್ಲಿಸಿದ್ದೆ, ಪ್ರವಾಸದ ದಾಖಲೆಗಳು ಮತ್ತು ಟಿಕೆಟ್ ನ ಪ್ರತಿ ಕೂಡ ಸರ್ಕಾರಕ್ಕೆ ನೀಡಿದ್ದೆ. ಆದರೆ ಸರ್ಕಾರದಿಂದ ಅನುಮತಿ ಸಿಗುವಾಗ ತಡವಾಗಿ 80 ಸಾವಿರ ರೂಪಾಯಿ ಕಳೆದುಕೊಂಡೆ'' ಎನ್ನುತ್ತಾರೆ ಅವರು.

ಇಂತಹ ಹಲವು ಪ್ರಕರಣಗಳಲ್ಲಿ ಉಪನ್ಯಾಸಕರು ತಮ್ಮ ಹಣ ಮತ್ತು ವಿದೇಶ ಪ್ರವಾಸದ ಅವಕಾಶವನ್ನು ಕಳೆದುಕೊಂಡಿದ್ದಾರೆ. ರಜಾ ದಿನಗಳಲ್ಲಿ ಕೂಡ ನಮ್ಮ ಕುಟುಂಬದವರ ಜೊತೆ ಹೋಗಬೇಕೆಂದು ನಿರ್ಧರಿಸಿದ ಪ್ರವಾಸವನ್ನು ಕೂಡ ಕೊನೆ ಕ್ಷಣದಲ್ಲಿ ರದ್ದುಪಡಿಸಿದ ಸಂದರ್ಭಗಳಿವೆ ಎನ್ನುತ್ತಾರೆ ಮಂಜುನಾಥ್.

ಪ್ರವಾಸಕ್ಕೆ ಏನೇನು ವಿವರಗಳು ನೀಡಬೇಕು?: ವಿದೇಶಿ ಪ್ರವಾಸ ಸಂದರ್ಭದಲ್ಲಿ ಅವರು ಎಲ್ಲಿ ವಾಸ್ತವ್ಯ ಹೂಡುತ್ತಾರೆ ಎಂದು ವಿವರ ನೀಡಬೇಕು.
-ನಿಗದಿಪಡಿಸಿದ ದಿನಾಂಕವೇ ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕು
-ವಿದೇಶಕ್ಕೆ ಹೋಗುವುದಿದ್ದರೆ ಆ ದೇಶದಲ್ಲಿರುವ ಸ್ನೇಹಿತರು ಮತ್ತು ಬಂಧುಗಳ ವಿವರ ಮತ್ತು ಸಂಪರ್ಕ ಸಂಖ್ಯೆ.
-ಪ್ರವಾಸದ ತಾತ್ಕಾಲಿಕ ವಿಳಾಸ
-ಪ್ರವಾಸದ ವೆಚ್ಚ
-ಟಿಕೆಟ್ ಮತ್ತು ಪಾಸ್ ಪೋರ್ಟ್ ನ ಪ್ರತಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT