ಸಂಗ್ರಹ ಚಿತ್ರ 
ರಾಜ್ಯ

ಕೊಪ್ಪಳ: ಮೊದಲ ರಾತ್ರಿಯಂದೇ ವಧು ಅಪಹರಣ, ಫಸ್ಟ್ ನೈಟ್ ಕನಸಿಗೆ ಕೊಳ್ಳಿಯಿಟ್ಟ ದುಷ್ಕರ್ಮಿಗಳು!

ಈಗಷ್ಟೇ ವಿವಾಹವಾಗಿದ್ದು ಇನ್ನೇನು ವಧೂ ವರರು ಮೊದಲ ರಾತ್ರಿಯ ಸವಿಯುಣಬೇಕು ಎನ್ನುವಷ್ಟರಲ್ಲಿ ವಧು ಅಪಹರಣಕ್ಕೊಳಗಾಗಿರುವ ವಿಲಕ್ಷಣ ಘಟನೆ ಕೊಪ್ಪಳ ಜಿಲ್ಲೆ ಗಂಘಾವತಿಯಲ್ಲಿ ನಡೆದಿದೆ.

ಕೊಪ್ಪಳ: ಈಗಷ್ಟೇ ವಿವಾಹವಾಗಿದ್ದು ಇನ್ನೇನು ವಧೂ ವರರು ಮೊದಲ ರಾತ್ರಿಯ ಸವಿಯುಣಬೇಕು ಎನ್ನುವಷ್ಟರಲ್ಲಿ ವಧು ಅಪಹರಣಕ್ಕೊಳಗಾಗಿರುವ ವಿಲಕ್ಷಣ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿ ತಾಲೂಕು ಗುಡೂರು ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮಲ್ಲನ ಗೌಡ ಹಾಗೂ ಗಾಯತ್ರಿ ವಿವಾಹವಾಗಿದ್ದರು. 15 ದಿನಗಳ ಹಿಂದೆ ಹುರು ಹಿರಿಯರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿತ್ತು.ಕುಷ್ಟಗಿ ತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ವಿವಾಹ ಜರುಗಿತ್ತು. 
ವಿವಾಹವಾಗಿ ಬಳಿಕ ವಧು-ವರರು ಮೊದಲ ರಾತ್ರಿ ಕಾರ್ಯಕ್ರಮವನ್ನು ಗುಡೂರಿನಲ್ಲಿ ಆಯೋಜಿಸಿದ್ದಾಗ ಅಪಹರಣಕಾರರು ಹೊಂಚು ಹಾಕಿ ವಧುವನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಪೋಲೀಸರು ತಿಳಿಸಿದರು.
ಮೊದಲ ರಾತ್ರಿಯಂದು ವಧು ಶೌಚಾಲಯಕ್ಕೆಂದು ತೆರಳಿದ್ದಾಗ ಅಲ್ಲೇ ಹೊಂಚುಹಾಕಿ ಕುಳಿತಿದ್ದ ಆರು ಮಂದಿ ದುಷ್ಕರ್ಮಿಗಳು ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ.ಮನೆಯವರೆಲ್ಲಾ ಸೇರಿ ಬಿಡಿಸಹೋದರೂ ಪ್ರಯೋಜನವಾಗಿಲ್ಲ. 
ಘಟನೆಗೆ ಸಂಬಂಧಿಸಿ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೋಲೀಸರು ಯಾವುದೇ ಕ್ರಮ ಕೈಗೊಲ್ಳುತ್ತಿಲ್ಲ ಎಂದು ದೂರುದಾರರಾದ ವರನ ಮನೆಯವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

SCROLL FOR NEXT