ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕ್ಯಾಸಿನೋ ಶೋಕಿಗಾಗಿ ದರೋಡೆ ಮಾಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ

ಕ್ಯಾಸಿನೋ ಆಟದ ಶೋಕಿಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅಲಿಯಾಸ್​ಜಂಗ್ಲಿ ಎಂಬಾತ ಬಂಧಿತ ..

ಬೆಂಗಳೂರು:  ಕ್ಯಾಸಿನೋ ಆಟದ ಶೋಕಿಗೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಸಾದ್ ಅಲಿಯಾಸ್​ಜಂಗ್ಲಿ ಎಂಬಾತ ಬಂಧಿತ ಆರೋಪಿ.
ವೀಕ್ ಎಂಡ್​ನಲ್ಲಿ ಒಂಟಿಯಾಗಿ ಇರುವ ಮನೆಯ ಬಾಗಿಲು ಮುರಿದು ಕಳ್ಳತನ‌ ಮಾಡಿ ಬಳಿಕ ವಿಮಾನದಲ್ಲಿ‌ ಗೋವಾಗೆ ಹೋಗುತ್ತಿದ್ದ. ಅಲ್ಲಿ ಗೋವಾದಲ್ಲಿ ಕ್ಯಾಸಿನೋ ಆಡುವುದಕ್ಕಾಗಿ ಮನೆಕಳ್ಳತನ ಮಾಡುತ್ತಿದ್ದ. ಅದು ಕೂಡ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ರಾಡ್​​ನಿಂದ ಬೀಗ ಮುರಿದು ಎಂಟ್ರಿ‌ ಕೊಡುತ್ತಿದ್ದ. ನಂತರ ಫಿಂಗರ್ ಪ್ರಿಂಟ್ ಸಿಗಬಾರದು ಅಂತ‌ ಮುಟ್ಟಿದ ಜಾಗವನ್ನು ಬಟ್ಟೆಯಿಂದ ಕ್ಲೀನ್ ಮಾಡುತ್ತಿದ್ದ.
ಇದೀಗ ಗಿರಿನಗರ ಪೊಲೀಸರು ಬಂಧಿಸಿ ಪ್ರಕಾಶ್​​ನಿಂದ ಒಂದು ಡಿಯೋ ಬೈಕ್ ಸೇರಿದಂತೆ 600 ಗ್ರಾಂ ಚಿನ್ನಾಭರಣ ಸೇರಿದಂತೆ 18 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. 
ಕ್ಯಾಸಿನೋ  ಆಡುವುದರೊಂದಿಗೆ ಐಷಾರಾಮಿ ಜೀವನ ನಡೆಸಲು ಈತ ಕಳ್ಳತನ ಮಾಡುತ್ತಿದ್ದ, ಈತನ ವಿರುದ್ಧ ಕೊಡಿಗೆಹಳ್ಳಿಯಲ್ಲಿ 10 ಕೇಸ್, ವಿಜಯನಗರ ಠಾಣೆಯಲ್ಲಿ ಮತ್ತು ಚೆನ್ನಮ್ಮನಕೆರೆಯಲ್ಲಿ ಕೇಸ್ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT