ಶಿವಮೊಗ್ಗದ ಕೇಂದ್ರ ಕಾರಾಗೃಹ 
ರಾಜ್ಯ

ಜೈಲಿನ ವೈದ್ಯರಿಗೆ ಹೊಡೆದ ವಿಚಾರಣಾಧೀನ ಕೈದಿ; ಹಿಂಡಲಗಾ ಜೈಲಿಗೆ ವರ್ಗಾವಣೆ

ಜಿಲ್ಲಾಸ್ಪತ್ರೆಗೆ ವರ್ಗಾಯಿಸಲು ಜೈಲು ಅಧಿಕಾರಿಗಳಿಗೆ ಶಿಫಾರಸು ಮಾಡಲು ....

ಶಿವಮೊಗ್ಗ: ಜಿಲ್ಲಾಸ್ಪತ್ರೆಗೆ ವರ್ಗಾಯಿಸಲು ಜೈಲು ಅಧಿಕಾರಿಗಳಿಗೆ ಶಿಫಾರಸು ಮಾಡಲು ನಿರಾಕರಿಸಿದ್ದಕ್ಕೆ ಜೈಲಿನ ವೈದ್ಯರಿಗೆ ವಿಚಾರಣಾಧೀನ ಕೈದಿ ಹೊಡೆದ ಘಟನೆ ಶಿವಮೊಗ್ಗದ ಹೊರವಲಯದಲ್ಲಿ ನಡೆದಿದೆ. ನಂತರ ಕೈದಿಯನ್ನು ಬೆಳಗಾವಿಯ ಹಿಂಡಲಗ ಜೈಲಿಗೆ ಆತನ ಮೂವರು ಸಹಚರರೊಂದಿಗೆ ಕಳುಹಿಸಲಾಯಿತು.

ಕಳೆದ ಗುರುವಾರ ಅಪರಾಹ್ನ ಒಟಿಗಟ್ಟಾ ಜೈಲಿನಲ್ಲಿ ಈ ಘಟನೆ ನಡೆದಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರ್ಬಾಜ್ ವಿರುದ್ಧ ಕೊಲೆ ಕೇಸು ದಾಖಲಾಗಿತ್ತು. ಈತ ಕಳೆದ 13 ವರ್ಷಗಳಿಂದ ಜೈಲಿನ ವೈದ್ಯಾಧಿಕಾರಿಯಾಗಿರುವ ಡಾ ರಘು ಪ್ರಸಾದ್ ವಿರುದ್ಧ ಹಲ್ಲೆ ನಡೆಸಿದವನಾಗಿದ್ದಾನೆ.

ಗಾಂಜಾ ಹೊಂದಿದ್ದ ಆರೋಪದ ಮೇಲೆ ಅರ್ಬಾಜ್ ನನ್ನು ಜೈಲಿನ ವಿಶೇಷ ಕೇಂದ್ರದಲ್ಲಿರಿಸಲಾಗಿತ್ತು. 24 ಗಂಟೆಗಳಿಂದ ಆತ ಆ ಕೋಣೆಯಲ್ಲಿದ್ದ. ಇದ್ದಕ್ಕಿದ್ದಂತೆ ಜೈಲಿನ ಸಿಬ್ಬಂದಿ ಮೇಲೆ ಅರ್ಬಾಜ್ ಕಿರುಚಲು ಆರಂಭಿಸಿದ. ಒಂದು ಹಂತದಲ್ಲಿ ಟ್ಯೂಬ್ ಲೈಟ್ ನಲ್ಲಿ ತನ್ನ ಮೇಲೆ ತಾನೇ ಹಲ್ಲೆ ಮಾಡಲು ಯತ್ನಿಸಿದ್ದ ಕೂಡ.

ಗಾಯಗೊಂಡ ಅರ್ಬಾಸ್ ಗೆ ಚಿಕಿತ್ಸೆ ನೀಡಲು ವೈದ್ಯರನ್ನು ಕರೆದಿದ್ದಾರೆ. ಈ ವೇಳೆ ಮೆಕ್ಗಾನ್ ಆಸ್ಪತ್ರೆಗೆ ವರ್ಗಾಯಿಸುವಂತೆ ಅರ್ಬಾಸ್ ವೈದ್ಯರನ್ನು ಕೇಳಿಕೊಂಡ. ಆದರೆ ಗಾಯ ದೊಡ್ಡದಾಗಿಲ್ಲ ಹೀಗಾಗಿ ಪ್ರಾಥಮಿಕ ಚಿಕಿತ್ಸೆ ಸಾಕು ಎಂದು ವೈದ್ಯರು ಹೇಳಿದರು. ಅರ್ಬಾಸ್ ಹೆಚ್ಚಿನ ಚಿಕಿತ್ಸೆ ನೀಡುವಂತೆ ಗಲಾಟೆ ಮಾಡಲಾರಂಭಿಸಿದನು. ಆದರೆ ವೈದ್ಯರು ಒಪ್ಪಲಿಲ್ಲ, ಆಗ ಅರ್ಬಾಸ್ ವೈದ್ಯರಿಗೆ ಹೊಡೆದನು ಎಂದು ಜೈಲಿನ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT