ಸಂಗ್ರಹ ಚಿತ್ರ 
ರಾಜ್ಯ

ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕಡಿವಾಣ, ಸುತ್ತೋಲೆ ಮೂಲಕ ನಿಯಂತ್ರಣ ಹೇರಿದ ಸರ್ಕಾರ

ಇನ್ನು ರಾಜ್ಯದ ಗಣ್ಯರು, ಆಡಳಿತಶಾಹಿಗಳಿಗೆ ವಿದೇಶ ಪ್ರವಾಸ ತೆರಳುವುದು ಅಷ್ಟು ಸರಳವಾಗಿರುವುದಿಲ್ಲ. ಸರ್ಕಾರ ಹೊರಡಿಸಿರುವ ನೂತನ ಸುತ್ತೋಲೆಯ ಅನುಸಾರ....

ಬೆಂಗಳೂರು: ಇನ್ನು ರಾಜ್ಯದ ಗಣ್ಯರು, ಆಡಳಿತಶಾಹಿಗಳಿಗೆ ವಿದೇಶ ಪ್ರವಾಸ ತೆರಳುವುದು ಅಷ್ಟು ಸರಳವಾಗಿರುವುದಿಲ್ಲ. ಸರ್ಕಾರ ಹೊರಡಿಸಿರುವ ನೂತನ ಸುತ್ತೋಲೆಯ ಅನುಸಾರವಿದೇಅ ಪ್ರವಾಸದ ಎಲ್ಲಾ ವಿವರಗಳನ್ನು  ಮುಖ್ಯಮಂತ್ರಿಗಳಿಗೆ ನೇರವಾಗಿ ಅನುಮೋದನೆಗೆ ಕಳುಹಿಸುವ ಬದಲು ಇಲಾಖೆಗಳ ಉಸ್ತುವಾರಿ ಸಚಿವರಿಗೆ ನಿಡಬೇಕು.
ಅಲ್ಲದೆ ಐಎಎಸ್ ಅಧಿಕಾರಿಗಳ ಕೇಂದ್ರ ಗೃಹ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮೋದನೆ ಪಡೆಯಬೇಕೆನ್ನುವ ಮೂಲಕ ಅನುಮೋದನೆ ವ್ಯಾಪ್ತಿಯನ್ನು ಸಹ ವಿಸ್ತರಿಸಲಾಗಿದೆ
ಏಕಾಂಗಿಯಾಗಿ ಪ್ರಯಾಣಿಸುವ ಅಥವಾ ಸಚಿವರೊಂದಿಗೆ ನಿಯೋಗದ ಭಾಗವಾಗಿ, ಭೇಟಿ ನೀಡುವ ಅಧಿಕಾರಿಗಳು ಹಾಗೆ ಭೇಟಿ ನೀಡುವ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಬೇಕು. ಸಾಂಪ್ರದಾಯಿಕ ವೆಚ್ಚ ಹೊರತಾಗಿ ವಿದೇಶಿ ಆತಿಥ್ಯ ಸ್ವೀಕಾರ ಪ್ರವಾಸದ ಅಧಿಕಾರಿಗಳ ಜೊತೆಯಲ್ಲಿರುವವರ ವಿವರಗಳು ಸೇರಿ ಎಲ್ಲಾ ವಿವರಗಳನ್ನು ಪ್ರತಿ ಇಲಾಖೆಯ ಮಂತ್ರಿಗಳಿಂದ ಅನುಮತಿ ಪಡೆಯಬೇಕು.
ವ್ಯಕ್ತಿಗತ ಮತ್ತು ಆಡಳಿತಾತ್ಮಕ ಸುಧಾರಣೆಗಳ ಇಲಾಖೆ, ಮತ್ತು ಮುಖ್ಯಮಂತ್ರಿಗಳಿಗೆ ಮಾಹಿತಿ ರವಾನಿಸಬೇಕು. ವಿದೇಶಿ ಆತಿಥ್ಯದ ಸಂದರ್ಭದಲ್ಲಿ ಗೃಹ ಸಚಿವಾಲಯದೊಡನೆ ಸಮಾಲೋಚಿಸಿದ ಬಳಿಕ ಎಫ್ ಸಿ ಆರ್ ಎ ಅನುಮತಿ ಹೊರತಾಗಿ  ಐಎಎಸ್ ಅಧಿಕಾರಿಗಳಿಗೆ ವಿದೇಶಾಂಗ ಸಚಿವಾಲಯದಿಂದ ರಾಜಕೀಯ ಸ್ಪಷ್ಟೀಕರಣವನ್ನು ಪಡೆಯಲು ಹೇಳಲಾಗಿದೆ.
ಇಡೀ ಪ್ರಕ್ರಿಯೆಯು 2-3 ವಾರಗಳವರೆಗೆ ತೆಗೆದುಕೊಳ್ಳುತ್ತದೆ. ಅಧಿಕಾರಿಗಳು ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಅಗತ್ಯವಿದೆ, ಎಲ್ಲಾ ಸ್ಪಷ್ಟತೆಗಳನ್ನು ಪಡೆದುಕೊಳ್ಳಬೇಕು ಮತ್ತು ಮುಂಚಿತವಾಗಿ ತಮ್ಮ ಪತ್ರಗಳನ್ನು ಲಗತ್ತಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT