ಅರಸೀಕೆರೆ ತಾಲೂಕು ಕೋಡಿಮಠದ ಶ್ರೀ ಶಿವನಾಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ
ಹಾಸನ: ಮುಂದಿನ ಮೂರು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳು ಕಂಡು ಬರಲಿವೆ ಎಂದು ಅರಸೀಕೆರೆ ತಾಲೂಕು ಕೋಡಿಮಠದ ಶ್ರೀ ಶಿವನಾಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಅರಸೀಕೆರೆ ತಾಲೂಕು ಮಾಡಾಳು ಗ್ರಾಮದಲ್ಲಿ ಮಾತನಾಡಿರುವ ಅವರು, ಈ ಹಿಂದೆ ರಾಜ್ಯ ರಾಜಕೀಯ ಭ್ರಾತೃ ಬಲ ಹೆಚ್ಚಾಗಲಿದೆ ಎಂದು ಹೇಳಿದ್ದೆ. ಅದು ಬೆಳಗಾವಿ ಸಹೋದರ ಜಿದ್ದಾಜಿದ್ದಿ ಮೂಲಕ ನಿಜವಾಗಿದೆ. ಮುಂದಿನ ನವೆಂಬರ್ ವರೆಗೂ ರಾಜ್ಯ ರಾಜಕೀಯ ಬಿಕ್ಕಟ್ಟು ಮುಂದುವರೆಯಲಿದ್ದು, ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆಂದು ಹೇಳಿದ್ದಾರೆ.
ಬೆಳಗಾವಿಯಂತಹದ್ದೇ ಸಮಸ್ಯೆ ಭವಿಷ್ಯದಲ್ಲಿ ಸೃಷ್ಟಿಯಾಗಲಿದ್ದು, ಎಲ್ಲದಕ್ಕೂ ನವೆಂಬರ್ ವರೆಗೂ ಕಾದು ನೋಡಿ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos