ಬೆಂಗಳೂರು: ದೇಶದಲ್ಲೇ ಬೃಹತ್ ಜಿಎಸ್ಟಿ ಹಗರಣವೊಂದು ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ 2000 ಕೋಟಿ ರೂ. ಮೌಲ್ಯದ ಹಗರಣವನ್ನು ಬೆಂಗಳೂರಿನ ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದು ವಂಚಕ ವಿಕ್ರಮ್ ದುಗಾಲ್ ಎನ್ನುವವನನ್ನು ಬಂಧಿಸಿದ್ದಾರೆ.
ದುಗಾಲ್ ನಕಲಿ ಬಿಲ್ ಗಳನ್ನು ಸೃಷ್ಟಿಸುವ ಮೂಲಕ ಸುಮಾರು ಎರಡು ಸಾವಿರ ಕೋಟಿ ಮೊತ್ತದ ಸರಕು ಸೇವಾ ತೆರಿಗೆಗಳನ್ನು ವಂಚಿಸಿದ್ದನೆನ್ನಲಾಗಿದೆ.
ಬೆಂಗಳೂರಿನ ಟಿ.ದಾಸರಹಳ್ಳಿ, ಚಿಕ್ಕ ಬಾಣಾವಾರ ಸೇರಿ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿರುವ ವಾಣಿಜ್ಯ ತೆರಿಗೆ ಅಧಿಕಾರಿಗಳು ಹಲವು ದಾಖಲೆ, ಕಡತ ಹಾಗೂ ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದಿದ್ದಾರೆ.ದಾಳಿ ಸಮಯದಲ್ಲಿ ಸುಮಾರು 203 ಕೋಟಿ ರು. ಮೊತ್ತದ ತೆರಿಗೆ ವಂಚನೆ ಮಾಡಿರುವ ನಕಲಿ ಬಿಲ್ ಸಹ ಪತ್ತೆಯಾಗಿದೆ.
ಬಂಧಿತ ಆರೋಪಿಯಾದ ದುಗಾಲ್ ಎರಡು ಸಂಸ್ಥೆಗಳನ್ನು ನಡೆಸುತ್ತಿದ್ದು ಈತನ ಕಛೇರಿ ಹಾಗೂ ಮನೆಯಲ್ಲಿ ಒಟ್ಟು 14 ಸಂಸ್ಥೆಗಳಿಗೆ ಸೇರಿದ ನಕಲಿ ಬಿಲ್ ಗಳು ಪತ್ತೆಯಾಗಿದೆ. ಎಂದರೆ ದುಗಾಲ್ ಬೇರೆಯವರ ಹೆಸರಲ್ಲಿ ಬರೋಬ್ಬರಿ 12 ಸಂಸ್ಸ್ಥೆಗಳನ್ನು ನಡೆಸುತ್ತಿದ್ದರೆನ್ನುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
ದೇಶದಲ್ಲಿ ಕಳೆದ ವರ್ಷದಿಂದ ಜಾರಿಗೆ ಬಂದಿರುವ ನೂತನ ಸರಕು ಸೇವಾ ತೆರಿಗೆ ಪದ್ದತಿಯ್ತಿಂದ ದೇಶದ ಯಾವುದೇ ಮೂಲೆಯಲ್ಲಿದ್ದು ಒಮ್ಮೆ ತೆರಿಗೆ ಫಾವತಿಸಿದರೆ ಆ ವಸ್ತುಗಳನ್ನು ದೇಶದ ಇನ್ನಾವುದೇ ಮೂಲೆಗೆ ಸಾಗಿಸಲು ಅವಕಾಶವಿದೆ. ಆದರೆ ವ್ಯಾಪಾರಸ್ಥರು, ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಇಂತಹಾ ತೆರಿಗೆ ಪದ್ದತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವದು ಇದೀಗ ಬೆಳಕಿಗೆ ಬಂದಿದ್ದು ದೇಶದಲ್ಲಿ ಇದು ಭಾರೀ ದೊಡ್ಡ ಜಿಎಸ್ಟಿ ವಂಚನೆ ಪ್ರಕರಣ ಆಗಿರುವುದುಆಗಿ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos