ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಟೆರೇಸ್ ನಲ್ಲಿ ಸಿಗರೇಟು ಸೇದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ; ಪೊಲೀಸರಿಂದ ತನಿಖೆ

ಸ್ನೇಹಿತನ ಮನೆಯ ಟೆರೇಸ್ ಮೇಲೆ ಸಿಗರೇಟು ಹೊತ್ತಿಸಿ ಬಾಯಲ್ಲಿಟ್ಟು ಹೊಗೆ ಬಿಡುತ್ತಿದ್ದ ರಾಮಮೂರ್ತಿ ...

ಬೆಂಗಳೂರು: ಸ್ನೇಹಿತನ ಮನೆಯ ಟೆರೇಸ್ ಮೇಲೆ ಸಿಗರೇಟು ಹೊತ್ತಿಸಿ ಬಾಯಲ್ಲಿಟ್ಟು ಹೊಗೆ ಬಿಡುತ್ತಿದ್ದ ರಾಮಮೂರ್ತಿ ನಗರದ ವಿಜ್ಞಾನಪುರ ನಿವಾಸಿ ಶರವಣ ಜೆ ಅವರಿಗೆ ಸ್ವಲ್ಪ ಹೊತ್ತಿನಲ್ಲಿಯೇ ಸಾವು ಬದುಕಿನ ನಡುವೆ ಹೋರಾಟ ನಡೆಸುವ ಪರಿಸ್ಥಿತಿ ಬರಬಹುದು ಎಂದು ಯೋಚನೆಯೇ ಬಂದಿರಲಿಲ್ಲ.
ನಡೆದಿದ್ದೇನು: 38 ವರ್ಷದ ಶರವಣ್ ತನ್ನ ಸ್ನೇಹಿತ ಶಂಕರ್ ನನ್ನು ಭೇಟಿ ಮಾಡಲೆಂದು ಬಂಜಾರ ಲೇ ಔಟ್ ನಲ್ಲಿರುವ ಮನೆಗೆ ಹೋಗಿದ್ದರು. ಶಂಕರ್ ಮನೆಯ ಟೆರೇಸ್ ಮೇಲೆ ಹೋಗಿ ಸಿಗರೇಟು ಎಳೆಯುತ್ತಾ ಮೊಬೈಲ್ ನಲ್ಲಿ ಯಾರಲ್ಲೋ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಪಕ್ಕದ ಮನೆಯ ಟೆರೇಸ್ ಮೇಲೆ ಇಬ್ಬರು ಹೆಂಗಸರು ನಿಂತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶರವಣ್ ಹೇಳಿದ್ದಾರೆ.
ಸಿಗರೇಟು ಎಳೆಯುತ್ತಾ ಅತ್ತಿಂದಿತ್ತ ಅಡ್ಡಾಡುತ್ತಿದ್ದ ಶರವಣ್ ನನ್ನು ನೋಡಿ ಮಹಿಳೆಯರು ಯಾರಿಗೋ ಹೇಳಿದ್ದಾರೆ. ಕೂಡಲೇ ಒಬ್ಬ ವ್ಯಕ್ತಿ ಬಂದು ಶರವಣ್ ಗೆ ಟೆರೇಸ್ ಮೇಲೆ ಸಿಗರೇಟು ಎಳೆಯಬೇಡಿ, ಮನೆಯ ಒಳಗೆ ಹೋಗಿ ಬೇಕಾದರೆ ಎಳೆದುಕೊಳ್ಳಿ ಎಂದಿದ್ದಾರೆ.
ಕೂಡಲೇ ನಾನು ಸಿಗರೇಟನ್ನು ಕೆಳಗೆ ಎಸೆದು ಇಲ್ಲಿ ಎಳೆಯುವುದಿಲ್ಲ ಎಂದು ಹೇಳಿದೆ. ಆತ ಕಿರುಚಾಡುತ್ತಿದ್ದ, ಅದಕ್ಕೆ ಏಕೆ ಕಿರುಚಾಡುತ್ತಿರುವೆ ಎಂದು ಕೇಳಿದೆ. ಆಗ ಪಕ್ಕದ ಮನೆಯವರು ನನ್ನನ್ನು ಕೆಳಗೆ ಬರಲು ಹೇಳಿದರು. ಅವರು ನನ್ನಲ್ಲಿ ಏನೋ ಮಾತನಾಡಲು ಕರೆಯುತ್ತಿದ್ದಾರೆ ಅಂದುಕೊಂಡೆ. ಕೆಳಗೆ ಹೋದರೆ ಟೈಲ್ಸ್ ನಲ್ಲಿ ನನಗೆ ಹೊಡೆಯಲು ಆರಂಭಿಸಿದ ಎಂದು ಶರವಣ ಪೊಲೀಸರಿಗೆ ತಿಳಿಸಿದ್ದಾರೆ.
ಶಂಕರ್ ಮಧ್ಯೆ ಪ್ರವೇಶಿಸಿ ಬಿಡಿಸಲು ಯತ್ನಿಸಿದರಾದರೂ ಇಬ್ಬರು ಮಹಿಳೆಯರು ಮತ್ತೆ ಮತ್ತೆ ಹೊಡೆಯುವಂತೆ ಹೇಳಿದ್ದಾರೆ. ಜಗಳ ಜಾಸ್ತಿಯಾದಾಗ ಸುತ್ತಮುತ್ತಲಿನವರು ಸೇರಿದರು. ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಮುಂದಾದೆವು. ಆದರೆ ಪೊಲೀಸರು ಮೊದಲು ಹೋಗಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ತೆಗೆದುಕೊಂಡು ಬನ್ನಿ ಎಂದರು. ನಾನು ಕೆ ಆರ್ ಪುರಂನ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಂತರ ಮರುದಿನ ಪೊಲೀಸ್ ದೂರು ನೀಡಿದೆ ಎಂದರು ಶರವಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT