ರಾಜ್ಯ

ಬೆಂಗಳೂರು: ಅನಿಲ ಸೋರಿಕೆಯಿಂದ ಅಗ್ನಿ ದುರಂತ, ಮೂವರ ದುರ್ಮರಣ

Shilpa D
ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಮೂವರು ಸಾವನ್ನಪ್ಪಿರುವ ಘಟನೆ ಬಾಣಸವಾಡಿಯ ನಾಗಯ್ಯನಪಾಳ್ಯದಲ್ಲಿ ನಡೆದಿದೆ. 
ಕಬ್ಬಿನ ಹಾಲು ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ. ಸಂಜಯ್, ಶರಣ್ ರಾಮ್ ಭರತ್ ಮೃತ ದುರ್ದೈವಿಗಳು, ನಿರಂಜನ್ ಎಂಬುವರ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ,
ಕಳೆದ ನಾಲ್ಕು ತಿಂಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ  ಈ ಕಾರ್ಮಿಕರ ನಾಗಯ್ಯನ ಪಾಳ್ಯದಲ್ಲಿ ಮನೆ ಬಾಡಿಗೆ ಪಡೆದು ನೆಲೆಸಿದ್ದರು. ಹೊಸದಾಗಿ ಸ್ಟೌ ಮತ್ತು ಸಿಲಿಂಡರ್ ಖರೀದಿಸಿದ್ದ ಅವರು ರಾತ್ರಿ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ರೆಗ್ಯುಲೇಟರ್ ಸರಿಯಾಗಿ ಬಂದ್ ಮಾಡದ ಕಾರಣ ರಾತ್ರಿಯಿಡಿ ಅನಿಲ ಸೋರಿಕೆಯಾಗಿತ್ತು.,
ಬೆಳಗ್ಗೆ 11 ಗಂಟೆ ಸುಮಾರಿಗೆ ಸಾರು ಬಿಸಿ ಮಾಡಲೆಂದು ಸಂಜಯ್ ಸ್ಟೌ ಹೊತ್ತಿಸಲು ಹೋಗಿದ್ದರು, ತಕ್ಷಣವೇ ದಗ್ಗನೆ ಬೆಂಕಿ ಹೊತ್ತಿಕೊಂಡು ಅದರ ಕೆನ್ನಾಲಗೆ ಇಡೀ ಮನೆಯನ್ನು ಆವರಿಸಿತ್ತು. ಸ್ಫೋಟದ ಶಬ್ದ ಕೇಳಿ ನೆರವಿಗೆ ಧಾವಿಸಿದ್ದ ಸ್ಥಳೀಯರು ಮೈಮೇಲೆ ನೀರರೆಚಿ ಬೆಂಕಿ ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
SCROLL FOR NEXT