ರಾಜ್ಯ

ರಾಯಚೂರು: ವಿದ್ಯಾರ್ಥಿನಿ ಸಾವು ಪ್ರಕರಣ, ಸಿಐಡಿಯಿಂದ ಆರೋಪಿಯ ತೀವ್ರ ವಿಚಾರಣೆ, ಪೊಲೀಸರಿಗೆ ಪ್ರತಿಭಟನೆ ಬಿಸಿ

Nagaraja AB

ರಾಯಚೂರು:  23 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅಜ್ಞಾತ ಸ್ಥಳದಲ್ಲಿ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಮಧ್ಯೆ ಅನ್ಯಾಯವನ್ನು ಖಂಡಿಸಿ ಬೃಹತ್  ಪ್ರತಿಭಟನೆ ನಡೆಸಲಾಯಿತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

 ವಿಶ್ವ ಕರ್ಮ ಸಮುದಾಯದ ಮುಖಂಡ ಮಾರುತಿ ಬಡಿಗೇರ್ ಸೀಮೆ ಎಣ್ಣೆ ಸುರಿದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದರು. ಆದಾಗ್ಯೂ, ಪೊಲೀಸರು ಇದನ್ನು ತಡೆದರು. ಮತ್ತೊಂದೆಡೆ ಕೆಲವು ದುಷ್ಕರ್ಮಿಗಳು ಪೊಲೀಸರತ್ತ ಕಲ್ಲು ಮತ್ತು ನೀರಿನ ಬಾಟಲಿಗಳನ್ನು ತೂರಿದ್ದಾರೆ. ಈ  ವೇಳೆ ವಿಶ್ವಕರ್ಮ ಅಸೋಸಿಯೇಷನ್  ಜಿಲ್ಲಾ ಅಧ್ಯಕ್ಷ ಗುರು ತಲೆಗೆ ಗಾಯವಾಗಿದೆ.

ಮಾಣಿಕ್ ಪರಬು ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ನಡೆದ ಪ್ರತಿಭಟನೆಯಲ್ಲಿ ವಿಶ್ವಕರ್ಮ ಸಮುದಾಯದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಡಿಗೇರ್ ಮೊದಲ ಬಾರಿಗೆ ಅಂಬೇಡ್ಕರ್ ವೃತ್ತದ ಬಳಿ ಸೀಮೆ ಎಣ್ಣೆ ಸುರಿದುಕೊಂಡು ಪ್ರತಿಭಟನೆಗೆ ಯತ್ನಿಸಿದರು.
ನಂತರ  ಜಿಲ್ಲಾಧಿಕಾರಿ ಕಚೇರಿ ಬಳಿಯೂ ಅದನ್ನು ಪುನರಾವರ್ತಿಸಿದರು. ಪೊಲೀಸರು ಆತನನನ್ನು ವಶಕ್ಕೆ ಪಡೆದುಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದರು.
SCROLL FOR NEXT