ರಾಜ್ಯ

ಮಳೆ ಪ್ರವಾಹದಿಂದ ಹಾಸನದಲ್ಲಿ 105 ಕೋಟಿ ರು ಮೌಲ್ಯದ ಆಸ್ತಿಗೆ ಹಾನಿ: ಬಿಜೆಪಿ

Shilpa D

ಹಾಸನ:  ರಾಜ್ಯದಲ್ಲಿ ಉಂಟಗಾುತ್ತಿರುವ ಘನಘೋರ ಜಲಪ್ರಳಯದಿಂದಾಗ ಹಾಸನ ಜಿಲ್ಲೆಯಲ್ಲಿ ಸುಮಾರು 105 ಕೋಟಿ ರು ಮೌಲ್ಯದ ಆಸ್ತಿಗೆ ಹಾನಿಯಾಗಿದೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಪ್ರವಾಹ ಪರಿಶೀಲನೆಗಾಗಿ ಹಾಸನಕ್ಕೆ ತೆರಳಿದ್ದ ಅವರು ಸುದ್ದಿಗಾರರೊಂದಿಗ ಮಾತನಾಡಿದರು ಈ ವೇಳೆ ಪ್ರವಾಹದಿಂದ  ಪರಿಹಾರ ಕಾರ್ಯಗಳು ವಿಳಂಬವಾಗುವುದಿಲ್ಲ, ಅವಶ್ಯಕತೆಯಿರುವಷ್ಟು ಪರಿಹಾರ ಹಣವನ್ನು ರಿಲೀಸ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಹಾನಿಯಾಗಿರುವ ಮೌಲ್ಯಕ್ಕಿಂತ 5 ಕೋಟಿ ರು ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಕರ್ನಾಟಕಕ್ಕೆ 128 ಕೋಟಿ ರು ಹಣ ಬಿಡುಗೆಡೆ ಮಾಡಿದೆ ಎಂದು ಶಾಸಕ ವಿ.ಸೋಮಣ್ಣ ತಿಳಿಸಿದ್ದಾರೆ. ಹಾಸನದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇದುವರೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.

SCROLL FOR NEXT