ರಾಜ್ಯ

ಚಿತ್ರದುರ್ಗ: ಗೇಮ್ ಆಡಲು ಮೊಬೈಲ್ ಕೊಡಲಿಲ್ಲವೆಂದು ಆತ್ನಹತ್ಯೆಗೆ ಶರಣಾದ ಬಾಲಕ!

Lingaraj Badiger

ಚಿತ್ರದುರ್ಗ: ಗೇಮ್​ ಆಡಲು ತನ್ನ ತಂದೆ ಮೊಬೈಲ್​ ಫೋನ್​ ನೀಡಲಿಲ್ಲವೆಂದು ಮನನೊಂದ 13 ವರ್ಷದ ಬಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ನಗರದ ಅಂಬೇಡ್ಕರ್ ನಗರದಲ್ಲಿ ಸೋಮವಾರ ನಡೆದಿದೆ.

ಅಂಬೇಡ್ಕರ್ ನಗರದ ನಿವಾಸಿಗಳಾದ ಕಿಟ್ಟಿ ಮತ್ತು ಶಂಕ್ರಮ್ಮ ದಂಪತಿ ಮಗ ರಾಘವೇಂದ್ರ (13) ಮೃತ ಬಾಲಕ.

ಗೇಮ್ ಆಡಬೇಕೆಂದು ರಾಘವೇಂದ್ರ ತಮ್ಮ ತಂದೆಗೆ ಮೊಬೈಲ್ ಕೇಳಿದ್ದ. ಅವರು ನಿರಾಕರಿಸಿದಾಗ ಮನನೊಂದ ಆತ ಮನೆಯ ಕೊಠಡಿ ಒಳಗೆ ಹೋಗಿ ತಾಯಿಯ ಸೀರೆಯಿಂದ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಚಳ್ಳಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

SCROLL FOR NEXT