ರಾಜ್ಯ

ವಿಜಯಪುರ: ಸಾಲದ ಬಾಧೆ ತಾಳದೆ ರೈತ ಆತ್ಮಹತ್ಯೆ

Lingaraj Badiger

ವಿಜಯಪುರ: ಸಾಲ ಬಾಧೆ ತಾಳಲಾರದೆ ರೈತನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ನಡೆದಿದೆ.

ಬಳಬಟ್ಟಿ ಗ್ರಾಮದ ಮುದ್ದಪ್ಪ ದಡ್ಡಿ(42 ) ಆತ್ಮಹತ್ಯೆಗೆ ಶರಣಾದ ರೈತ. ಇವರಿಗೆ ಹುಲ್ಲೂರದಲ್ಲಿ 4.27 ಎಕರೆ ಜಮೀನಿದ್ದು, ಕಬ್ಬಿನ ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಯಲಗೂರ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ 4.50 ಲಕ್ಷ ರೂ, ಎಲ್ ಆಂಡ್ ಟಿ ಫೈನಾನ್ಸ್ ನಲ್ಲಿ 5.50 ಲಕ್ಷ ರೂ ಹಾಗೂ ಸುಂದರಂ ಫೈನಾನ್ಸ್ ನಲ್ಲಿ 5.5 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

SCROLL FOR NEXT