ವಿಜಯಪುರ: ಕಾಂಗ್ರೆಸ್ ನಾಯಕಿ, ಮಾಜಿ ಜಿಲ್ಲಾ ಮುಖ್ಯಸ್ಥೆ ರೇಷ್ಮಾ ಪಡೆಕನೂರ ಹತ್ಯೆ ಪ್ರಕರಣದಲ್ಲಿ ಲಂಚ ಪಡೆದ ಆರೋಪದಡಿ ವಿಜಯಪುರ ಬಸವನಬಾಗೇವಾಡಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ವರ ಗೌಡ ಪಾಟೀಲ್, ಪೋಲೀಸ್ ಪೇದೆ ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಮೂವರನ್ನು ಮಹಾರಾಷ್ಟ್ರ ಎಸಿಬಿ ಬಂಧಿಸಿದೆ.
ರೇಷ್ಮಾ ಅವರ ಹತ್ಯೆ ಆರೋಪಿಗಳಿಂದ ಲಂಚ ಸ್ವೀಕರಿಸುವಾಗಲೇ ಎಸಿಬಿ ಇವರುಗಳನ್ನು ವಶಕ್ಕೆ ಪಡೆದಿದೆ ಎಂದು ಮಾದ್ಯಮ ವರದಿಯೊಂದು ಹೇಳಿದೆ.
ಘಟನೆ ಕುರಿತಂತೆ ಸದರಬಜಾರ್ ಪೋಲೀಸ್ ಠಣೆಯಲ್ಲಿ ಪ್ರಕರಣ ದಾಖಲಾಗಿದೆ.