ರಾಜ್ಯ

ಬೆಂಗಳೂರು: ಪತ್ನಿಯ ಐಷಾರಾಮಿ ಜೀವನಶೈಲಿಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಟೆಕ್ಕಿ

Manjula VN

ಬೆಂಗಳೂರು: ಪತ್ನಿಯ  ಐಷಾರಾಮಿ ಜೀವನಶೈಲಿಗೆ ಬೇಸತ್ತ ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ಳಂದೂರು ಠಾಣಾವ್ಯಾಪ್ತಿಯ ಹಾಲನಾಯಕನಹಳ್ಳಿಯಲ್ಲಿ ನಡೆದಿದೆ. 

ಶ್ರೀನಾಥ್ (39) ಆತ್ಮಹತ್ಯೆಗೆ ಶರಣಾದ ಟೆಕ್ಕಿಯಾಗಿದ್ದಾರೆ. ಸಾಲ ಮಾಡಿಕೊಂಡು ಅಪಾರ್ಟ್'ಮೆಂಟ್ ವೊಂದರಲ್ಲಿ ಮನೆ ತೆಗೆದುಕೊಂಡಿದ್ದ ಶ್ರೀನಾಥ್ ಅವರು ದುಂದುವೆಚ್ಚ ಮಾಡದಂತೆ ಪತ್ನಿ ರೇಖಾಗೆ ಹಲವು ಬಾರಿ ಬುದ್ಧಿ ಹೇಳಿದ್ದಾರೆ. 

ಸಾಲ ಹಾಗೂ ಮನೆಯ ವೆಚ್ಚಗಳಿಂದ ಪತಿ ಸಾಕಷ್ಟು ಸಮಸ್ಯೆಗಳಿಂದ ಸಿಲುಕಿಕೊಂಡಿದ್ದರೂ. ಇದಾವುದಕ್ಕೂ ತಲೆಕೆಡಿಸಿಕೊಳ್ಳದ ರೇಖಾ ತನ್ನ ಐಷಾರಾಮಿ ಜೀವನಶೈಲಿಯನ್ನು ಮುಂದುವರೆಸಿದ್ದರು. ಅಲ್ಲದೆ, ಆಸ್ತಿಯನ್ನು ತನ್ನ ತಂದೆಯ ಹೆಸರಿಗೆ ಬರೆಯುವಂತೆ ಪೀಡಿಸಲು ಆರಂಭಿಸಿದ್ದರು. 

ಇದರಿಂದ ಬೇಸತ್ತ ಶ್ರೀನಾಥ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದಿಗಳು ತಿಳಿಸಿವೆ. ಪ್ರಸ್ತುತ ಪ್ರಕರಣ ಸಂಬಂಧ ರೇಖಾ ಹಾಗೂ ಅವರ ಪೋಷಕರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. 

SCROLL FOR NEXT