ವಿನಯ್ ಗುರೂಜಿ ರಸ್ತೆ 
ರಾಜ್ಯ

ರಸ್ತೆಗೆ ವಿನಯ್ ಗುರೂಜಿ ಹೆಸರಿಟ್ಟು ಬಿಬಿಎಂಪಿ ಯಡವಟ್ಟು !

ಅರೆ ಇದೇನಿದು ವಿನಯ್ ಗುರೂಜಿಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಯಾವ ರೀತಿಯ ಸಂಬಂಧ ಎನ್ನುತ್ತೀರಾ? ಇದಕ್ಕೂ ಉತ್ತರವಿದೆ. ರಾಜಕಾರಣಿಗಳಿಗೆ ಅವಧೂತ ಸ್ವಾಮೀಜಿ ಗುರೂಜಿ ಎಂದೇ ಖ್ಯಾತಿ ಹೊಂದಿರುವ ಇವರಿಗೀಗ ಬಿಬಿಎಂಪಿ ರಸ್ತೆಯಲ್ಲಿ ಸುದ್ದಿಯಾಗಿದ್ದಾರೆ.

ಬೆಂಗಳೂರು:  ಗೌರಿಗದ್ದೆಯ ವಿನಯ್ ಗುರೂಜಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಕೇಂದ್ರಕ್ಕೆ ಬರುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಮುನ್ನಲೆಗೆ ಬಂದಿದ್ದ ಇವರೀಗ ಬಿಬಿಎಂಪಿಯಿಂದಾಗಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಅರೆ ಇದೇನಿದು ವಿನಯ್ ಗುರೂಜಿಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಯಾವ ರೀತಿಯ ಸಂಬಂಧ ಎನ್ನುತ್ತೀರಾ? ಇದಕ್ಕೂ ಉತ್ತರವಿದೆ. ರಾಜಕಾರಣಿಗಳಿಗೆ ಅವಧೂತ ಸ್ವಾಮೀಜಿ ಗುರೂಜಿ ಎಂದೇ ಖ್ಯಾತಿ ಹೊಂದಿರುವ ಇವರಿಗೀಗ ಬಿಬಿಎಂಪಿ ರಸ್ತೆಯಲ್ಲಿ ಸುದ್ದಿಯಾಗಿದ್ದಾರೆ.

ಉತ್ತರಹಳ್ಳಿ ವಾರ್ಡ್ ರಸ್ತೆಯೊಂದಕ್ಕೆ ಬಿಬಿಎಂಪಿ ವಿನಯ್ ಗುರೂಜಿ ಎಂದು ನಾಮಕರಣ ಮಾಡಿದೆ. ಅಂದಹಾಗೆ ಈ ರಸ್ತೆಗೆ ವಿನಯ್ ಗುರೂಜಿ ಹೆಸರನ್ನು ಇಡಲು ಕಾರಣವೇನು ಎನ್ನುವುದನ್ನು ನೋಡುವುದಾದರೆ ಉತ್ತರಹಳ್ಳಿಯ ಸುಬ್ರಮಣ್ಯಪುರಂ ಪೊಲೀಸ್ ಠಾಣೆ ಸರಹದ್ದಿನಲ್ಲಿಯೇ ವಿನಯ್ ಗುರೂಜಿ ಆಶ್ರಮವಿದೆ.  ಶಾಂತಿನಿಕೇತನ ಶಾಲೆಗೆ ಹೊಂದಿಕೊಂಡಂತಿರುವ ಈ ರಸ್ತೆಗೆ ಈವರೆಗೂ ಯಾವುದೇ ಹೆಸರು ಇರಲಿಲ್ಲ. ಸ್ವಾಮೀಜಿ ಅದೇ ರಸ್ತೆಯಲ್ಲಿ ಹೋಗಿ ಬರುವುದರಿಂದ ಅವರ ಹೆಸರನ್ನೇ ರಸ್ತೆಗೆ ಇಟ್ಟು ನಾಮಫಲಕ ಅಳವಡಿಸಲಾಗಿದೆ.
 
ರಸ್ತೆ ನಾಮಕರಣ ವಿಚಾರದಲ್ಲಿ ಏನು ನಿಯಮಗಳಿವೆ, ಯಾವ ರೀತಿ ಅದು ಪಾಲನೆಯಾಗಬೇಕು, ಯಾರ ಹೆಸರನ್ನು ಇಡಬೇಕು, ಯಾವ ಹಂತದಲ್ಲಿ ಇಡಬಾರದೆಂಬ ಕನಿಷ್ಠ ಜ್ಞಾನವೂ ಬಿಬಿಎಂಪಿಗೆ ಇದ್ದಂತಿಲ್ಲ.  ಸರ್ಕಾರ ರಸ್ತೆಗಳಿಗೆ ನಾಮಕರಣ ಮಾಡಲು ಗೈಡ್‍ಲೈನ್ ರೂಪಿಸಿದೆ. 2003ರ ಹೊಸ ಕಾನೂನು ಪ್ರಕಾರ ಬದುಕಿರುವ ವ್ಯಕ್ತಿಗಳ ಹೆಸರನ್ನು ಯಾವುದೇ ರಸ್ತೆಗೆ ನಾಮಕರಣ ಮಾಡುವಂತಿಲ್ಲ.

ಡಾ.ರಾಜ್‍ಕುಮಾರ್, ವಾಟಾಳ್ ನಾಗರಾಜ್ ಮತ್ತಿತರರ ಹೆಸರನ್ನು 2003ಕ್ಕಿಂತ ಮೊದಲೇ ಇಡಲಾಗಿತ್ತು. ಯಾವುದೇ ರಸ್ತೆಗೆ ನಾಮಕರಣ ಮಾಡುವ ವೇಳೆ ಅದಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡಬೇಕಾಗುತ್ತದೆ. ಸಾರ್ವಜನಿಕರಿಂದ ಸಲಹೆ-ಆಕ್ಷೇಪಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಬೇಕು. ನಂತರ ತುಲನೆ ಮಾಡಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಇಟ್ಟು ಅನುಮೋದನೆ ಪಡೆದು ಕಂದಾಯ ವಿಭಾಗಕ್ಕೆ ಕಳುಹಿಸಿ ಸರ್ಕಾರಕ್ಕೆ ರವಾನೆ ಮಾಡಬೇಕು. ಮುಂದಿನದು ಸರ್ಕಾರದ ವಿವೇಚನೆಗೆ ಬಿಟ್ಟದ್ದು.

ಆದರೆ ಇದಾವುದನ್ನೂಅನುಸರಿಸದೆ ಬಿಬಿಎಂಪಿಯವರು ಏಕಾಏಕಿ ವಿನಯ್ ಗುರೂಜಿ ಅವರ ಹೆಸರನ್ನು ರಸ್ತೆಗೆ ಇಟ್ಟಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT