ವಿನಯ್ ಗುರೂಜಿ ರಸ್ತೆ 
ರಾಜ್ಯ

ರಸ್ತೆಗೆ ವಿನಯ್ ಗುರೂಜಿ ಹೆಸರಿಟ್ಟು ಬಿಬಿಎಂಪಿ ಯಡವಟ್ಟು !

ಅರೆ ಇದೇನಿದು ವಿನಯ್ ಗುರೂಜಿಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಯಾವ ರೀತಿಯ ಸಂಬಂಧ ಎನ್ನುತ್ತೀರಾ? ಇದಕ್ಕೂ ಉತ್ತರವಿದೆ. ರಾಜಕಾರಣಿಗಳಿಗೆ ಅವಧೂತ ಸ್ವಾಮೀಜಿ ಗುರೂಜಿ ಎಂದೇ ಖ್ಯಾತಿ ಹೊಂದಿರುವ ಇವರಿಗೀಗ ಬಿಬಿಎಂಪಿ ರಸ್ತೆಯಲ್ಲಿ ಸುದ್ದಿಯಾಗಿದ್ದಾರೆ.

ಬೆಂಗಳೂರು:  ಗೌರಿಗದ್ದೆಯ ವಿನಯ್ ಗುರೂಜಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಕೇಂದ್ರಕ್ಕೆ ಬರುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಮುನ್ನಲೆಗೆ ಬಂದಿದ್ದ ಇವರೀಗ ಬಿಬಿಎಂಪಿಯಿಂದಾಗಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಅರೆ ಇದೇನಿದು ವಿನಯ್ ಗುರೂಜಿಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಯಾವ ರೀತಿಯ ಸಂಬಂಧ ಎನ್ನುತ್ತೀರಾ? ಇದಕ್ಕೂ ಉತ್ತರವಿದೆ. ರಾಜಕಾರಣಿಗಳಿಗೆ ಅವಧೂತ ಸ್ವಾಮೀಜಿ ಗುರೂಜಿ ಎಂದೇ ಖ್ಯಾತಿ ಹೊಂದಿರುವ ಇವರಿಗೀಗ ಬಿಬಿಎಂಪಿ ರಸ್ತೆಯಲ್ಲಿ ಸುದ್ದಿಯಾಗಿದ್ದಾರೆ.

ಉತ್ತರಹಳ್ಳಿ ವಾರ್ಡ್ ರಸ್ತೆಯೊಂದಕ್ಕೆ ಬಿಬಿಎಂಪಿ ವಿನಯ್ ಗುರೂಜಿ ಎಂದು ನಾಮಕರಣ ಮಾಡಿದೆ. ಅಂದಹಾಗೆ ಈ ರಸ್ತೆಗೆ ವಿನಯ್ ಗುರೂಜಿ ಹೆಸರನ್ನು ಇಡಲು ಕಾರಣವೇನು ಎನ್ನುವುದನ್ನು ನೋಡುವುದಾದರೆ ಉತ್ತರಹಳ್ಳಿಯ ಸುಬ್ರಮಣ್ಯಪುರಂ ಪೊಲೀಸ್ ಠಾಣೆ ಸರಹದ್ದಿನಲ್ಲಿಯೇ ವಿನಯ್ ಗುರೂಜಿ ಆಶ್ರಮವಿದೆ.  ಶಾಂತಿನಿಕೇತನ ಶಾಲೆಗೆ ಹೊಂದಿಕೊಂಡಂತಿರುವ ಈ ರಸ್ತೆಗೆ ಈವರೆಗೂ ಯಾವುದೇ ಹೆಸರು ಇರಲಿಲ್ಲ. ಸ್ವಾಮೀಜಿ ಅದೇ ರಸ್ತೆಯಲ್ಲಿ ಹೋಗಿ ಬರುವುದರಿಂದ ಅವರ ಹೆಸರನ್ನೇ ರಸ್ತೆಗೆ ಇಟ್ಟು ನಾಮಫಲಕ ಅಳವಡಿಸಲಾಗಿದೆ.
 
ರಸ್ತೆ ನಾಮಕರಣ ವಿಚಾರದಲ್ಲಿ ಏನು ನಿಯಮಗಳಿವೆ, ಯಾವ ರೀತಿ ಅದು ಪಾಲನೆಯಾಗಬೇಕು, ಯಾರ ಹೆಸರನ್ನು ಇಡಬೇಕು, ಯಾವ ಹಂತದಲ್ಲಿ ಇಡಬಾರದೆಂಬ ಕನಿಷ್ಠ ಜ್ಞಾನವೂ ಬಿಬಿಎಂಪಿಗೆ ಇದ್ದಂತಿಲ್ಲ.  ಸರ್ಕಾರ ರಸ್ತೆಗಳಿಗೆ ನಾಮಕರಣ ಮಾಡಲು ಗೈಡ್‍ಲೈನ್ ರೂಪಿಸಿದೆ. 2003ರ ಹೊಸ ಕಾನೂನು ಪ್ರಕಾರ ಬದುಕಿರುವ ವ್ಯಕ್ತಿಗಳ ಹೆಸರನ್ನು ಯಾವುದೇ ರಸ್ತೆಗೆ ನಾಮಕರಣ ಮಾಡುವಂತಿಲ್ಲ.

ಡಾ.ರಾಜ್‍ಕುಮಾರ್, ವಾಟಾಳ್ ನಾಗರಾಜ್ ಮತ್ತಿತರರ ಹೆಸರನ್ನು 2003ಕ್ಕಿಂತ ಮೊದಲೇ ಇಡಲಾಗಿತ್ತು. ಯಾವುದೇ ರಸ್ತೆಗೆ ನಾಮಕರಣ ಮಾಡುವ ವೇಳೆ ಅದಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡಬೇಕಾಗುತ್ತದೆ. ಸಾರ್ವಜನಿಕರಿಂದ ಸಲಹೆ-ಆಕ್ಷೇಪಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಬೇಕು. ನಂತರ ತುಲನೆ ಮಾಡಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಇಟ್ಟು ಅನುಮೋದನೆ ಪಡೆದು ಕಂದಾಯ ವಿಭಾಗಕ್ಕೆ ಕಳುಹಿಸಿ ಸರ್ಕಾರಕ್ಕೆ ರವಾನೆ ಮಾಡಬೇಕು. ಮುಂದಿನದು ಸರ್ಕಾರದ ವಿವೇಚನೆಗೆ ಬಿಟ್ಟದ್ದು.

ಆದರೆ ಇದಾವುದನ್ನೂಅನುಸರಿಸದೆ ಬಿಬಿಎಂಪಿಯವರು ಏಕಾಏಕಿ ವಿನಯ್ ಗುರೂಜಿ ಅವರ ಹೆಸರನ್ನು ರಸ್ತೆಗೆ ಇಟ್ಟಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

9 ವರ್ಷಗಳ ಬಳಿಕ ಇಸ್ರೇಲ್ ಗೆ ಪ್ರಧಾನಿ ಮೋದಿ ಭೇಟಿ; ಅದ್ದೂರಿ ರೆಡ್ ಕಾರ್ಪೆಟ್ ಸ್ವಾಗತ

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ: ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

SCROLL FOR NEXT