ರಾಜ್ಯ

ಕೊಪ್ಪಳದಲ್ಲಿ ಭೀಕರ ಕೊಲೆ, ರೈಲ್ವೆ ಕ್ವಾರ್ಟಸ್ ಬಳಿ ಶವ ಪತ್ತೆ 

Srinivas Rao BV

ಕೊಪ್ಪಳ: ವ್ಯಕ್ತಿಯೋರ್ವರನ್ನು ಭೀಕರವಾಗಿ ಕೊಲೆ ಮಾಡಿದ್ದು, ರೈಲ್ವೆ ಕ್ವಾರ್ಟಸ್ ಬಳಿ ಶವ ಪತ್ತೆಯಾಗಿರುವ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ. 

ತಾಲೂಕು ಮುನಿರಾಬಾದ್ ರೈಲ್ವೇ ಕ್ವಾರ್ಟಸ್ ಬಳಿ ಶವ ಪತ್ತೆಯಾಗಿದೆ.  ಕುಕನೂರು ತಾಲೂಕು ಬೀಡನಾಳ ಗ್ರಾಮದ ಹನುಮಂತ ಕೊಲೆಯಾದ ವ್ಯಕ್ತಿಯಾಗಿದ್ದು, ಮರ್ಮಾಂಗ, ಕಣ್ಣು ಕತ್ತರಿಸಿ ಅಮಾನುಷವಾಗಿ ಕೊಲೆ ಮಾಡಲಾಗಿದೆ. 

ಕೊಲೆಯಾದ ವ್ಯಕ್ತಿ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವ್ಯಕ್ತಿ ಕಳೆದ ಕೆಲ‌ ದಿನದ ಹಿಂದೆ ತಾವು ಪ್ರೇಮ ವಿವಾಹ ಆಗಿದ್ದಾಗಿ ಹೇಳಿಕೊಂಡಿದ್ದ. ಘಟನೆಗೆ ಸಂಬಂಧಿಸಿದಂತೆ  ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ-ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

SCROLL FOR NEXT