ರಾಜ್ಯ

ಪತ್ನಿ ಕೊಂದು ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿ ಎಫ್‌ಬಿಯಲ್ಲಿ ವಿಡಿಯೋ ಹಾಕಿ ಆತ್ಮಹತ್ಯೆ!

Vishwanath S
ಬೆಂಗಳೂರು: ಹೆಂಡತಿಯನ್ನು ಕೊಂದ ಆರೋಪದ ಮೇಲೆ ನಾಲ್ಕು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿಯೋರ್ವ ಫೇಸ್‍ಬುಕ್‍ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಚೆನ್ನಮ್ಮನಕೆರೆ ಅಚ್ಚುಕಟ್ಟು ನಿವಾಸಿ 41 ವರ್ಷದ ನಾಗರಾಜ್ ಎಂಬಾತ ಆತ್ಮಹತ್ಯೆಗೆ ಶರಣಾದ ಆರೋಪಿ. ಜಾಮೀನಿನ ಹೊರಬಂದಿದ್ದ ನಾಗರಾಜ್ ಒಬ್ಬಂಟಿಯಾಗಿ ವಾಸಿಸುತ್ತಿದ್ದ. ಇನ್ನು ಅತ್ತೆ ರಾಜಮ್ಮ ಮತ್ತು ಭಾಮೈದ ಹರೀಶ್ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ನಾಗರಾಜ್ ವಿಡಿಯೋ ಮಾಡಿದ್ದಾರೆ. 
ನಾಗರಾಜ್ ನಾಲ್ಕು ವರ್ಷಗಳಿಂದ ಪತ್ನಿ ಜ್ಯೋತಿ ಎಂಬುವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರು.
ನಾಗರಾಜ್ ಜನವರಿ 30ರಂದೆ ಆತ್ಮಹತ್ಯೆಗೆ ಶರಣಾಗಿರಬೇಕು. ನಾಗರಾಜ್ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ನೆರೆಮನೆಯವರು ನಮಗೆ ಮಾಹಿತಿ ನೀಡಿದ್ದು ಮನೆಯ ಬಾಗಿಲನ್ನು ಹೊಡೆದು ನೋಡಿದಾಗಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
SCROLL FOR NEXT