ಬೆಂಗಳೂರು: ಜಮೀನಿಗಾಗಿ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ! 
ರಾಜ್ಯ

ಬೆಂಗಳೂರು: ಜಮೀನಿಗಾಗಿ ಜಗಳ ಜೋಡಿ ಕೊಲೆಯಲ್ಲಿ ಅಂತ್ಯ!

ಜಮೀನಿಗಾಗಿ ನಡೆದ ಜಗಳ ತಾರಕಕ್ಕೇರಿ ಅಪ್ಪ-ಮಗನ ಜೋಡಿ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.

ಬೆಂಗಳೂರು: ಜಮೀನಿಗಾಗಿ ನಡೆದ ಜಗಳ ತಾರಕಕ್ಕೇರಿ ಅಪ್ಪ-ಮಗನ ಜೋಡಿ ಕೊಲೆಯೊಡನೆ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆಯ ಮುತ್ತಕದಹಳ್ಳಿಯಲ್ಲಿ ನಡೆದ ಕೃತ್ಯದಲ್ಲಿ ನಾರಾಯಣರೆಡ್ಡಿ (60) ಮತ್ತು ಇವರ ಪುತ್ರ ಲಿಂಗಾರೆಡ್ಡಿ (33) ಹತ್ಯೆಯಾಗಿದ್ದಾರೆ. ಮುತ್ತುಕದಹಳ್ಳಿಯ ಬಾಬು (35) ಎಂಬಾತನೇ ಆರೋಪಿಯಾಗಿದ್ದು ಹತ್ಯೆ ನಡೆಸಿದ ಬಳಿಕ ಆರೋಪಿ ತಾನೇ ಪೋಲೀಸರಿಗೆ ಶರಣಾಗಿದ್ದಾನೆ.

ಘಟನೆ ವಿವರ

ಮುತ್ತಕದಹಳ್ಳಿಯಲ್ಲಿ ನಾರಾಯಣರೆಡ್ಡಿ ತಮ್ಮ ಜಮೀನನ್ನು ಆರೋಪಿ ಬಾಬುವಿಗೆ ನೀಡಿದ್ದರು. ಆದರೆ ಜಮೀನು ನೀಡುವ ಕುರಿತು ಮಾತಿನ ಒಡಂಬಡಿಕೆ ವಿನಾ ನೊಂದಣಿ ಆಗಿರಲಿಲ್ಲ. ಈ ವಿಚಾರ ಅವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹಲವು ವೇಳೆ ಮಧ್ಯಸ್ಥದಾರರ ಸಂಧಾನದಿಂದ ಜಗಳ ಪರಿಹಾರ ಕಂಡಿತ್ತು.
ಆದರೆ ಸೋಮವಾರ ನಾರಾಯಣರೆಡ್ಡಿ ಹಾಗೂ ಅವರ ಪುತ್ರ ಲಿಂಗಾರೆಡ್ಡಿ ನೀಲಗಿರಿ ತೋಪಿನ ಬಳಿ ಕೆಲಸ ಮಾಡುತ್ತಿದ್ದಾಗ ಬಾಬು ಅಲ್ಲಿಗೆ ಆಗಮಿಸಿ ಮತ್ತೆ ವಾಗ್ವಾದಕ್ಕಿಳಿದಿದ್ದಾನೆ. ಆವೇಳೆ ಮಾತು ವಿಕೋಪಕ್ಕೆ ಹೋಗಿ ಎರಡೂ ಕಡೆಯವರು ಕೈ ಮಿಲಾಯಿಸಿದ್ದಾರೆ. ಈ ವೇಳೆ ಮಚ್ಚು ಹಿಡಿದೇ ಆಗಮಿಸಿದ್ದ ಆರೋಪಿ ಬಾಬು ಮೊದಲು ನಾರಾಯಣರೆಡ್ಡಿ ಆ ನಂತರ ಲಿಂಗಾರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದಾನೆ.

ಆರೋಪಿ ಕೊಲೆ ಬಳಿಕ ತಾನೇ ನೇರವಾಗಿ ಪೋಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆ ವಿವರ ಪಡೆದ ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT