ರಾಜ್ಯ

ಮಹಿಳಾ ಪೊಲೀಸ್ ಪೇದೆಯ ಚಿನ್ನದ ಸರ ಕದ್ದ ಚಾಲಾಕಿ

Shilpa D
ಬೆಂಗಳೂರು: ಸರಗಳ್ಳತನ ಹಾಗೂ ಪಿಕ್ ಪಾಕೆಟ್ ಸಂಬಂಧಿತ ಪ್ರಕರಣಗಳ ಕೇಸ್ ನೋಡಿಕೊಳ್ಳುತ್ತಿದ್ದ  ಮಹಿಳಾ ಪೇದೆಯೊಬ್ಬರ ಸರಗಳ್ಳತನ ಮಾಡಿರುವ ಪ್ರಕರಣ ಕೆ,ಆರ್ ಮಾರುಕಟ್ಟೆಯಲ್ಲಿ ನಡೆದಿದೆ.
ಹೈಗ್ರೌಂಡ್ ಪೊಲೀಸ್ ಠಾಣೆಯ ಪೇದೆ ಪದ್ಮಾವತಿ ಅವರ ಚಿನ್ನದ ಸರ ಕಳ್ಳತನವಾಗಿದೆ, ಶಾಂತಿನಗರದ ಬರೇಲಿ ಸ್ಟ್ರೀಟ್ ನ ಪೊಲೀಸ್ ಕ್ವಾರ್ಟರ್ಸ್ ನಿವಾಸಿ ಪದ್ಮಾವತಿ ಶಾಪಿಂಗ್ ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಸಂಜೆ 7.30 ರ ಸುಮಾರಿಗೆ ಪದ್ಮಾವತಿ ಅವರು ಕೆ.ಆರ್ ಮಾರುಕಟ್ಟೆಗೆ ತಲುಪಿದ್ದರು, ಅವರಿಗೆ ತಮ್ಮ ಸರ ಗಳ್ಳತನ ಆಗಿರುವುದು ಅರಿವಿಗೆ ಬಂದಿತ್ತು, ಅಲ್ಲಿ ಅನುಮಾನಾಸ್ಪದ ವ್ಯಕ್ತಿ ಯಾರಾದರೂ ಇದ್ದಾರೆಯೇ ಎಂದು ಹುಡುಕಾಟ ನಡೆಸಿದರು, ಆದರೆ ಅಲ್ಲಿ ಯಾರು ಇರಲಿಲ್ಲ, ಕೂಡಲೇ ಅವರು ನೇರವಾಗಿ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು 15 ಗ್ರಾಂ ತೂಕದ ಚಿನ್ನದ ಸರ 30 ಸಾವಿರ ರು ಬೆಲೆ ಬಾಳುವಂತದ್ದು ಎಂದು ಹೇಳಿದ್ದಾರೆ.
ಪದ್ಮಾವತಿ ಮಾರುಕಟ್ಟೆಯಲ್ಲಿ ಕಳೆದುಕೊಂಡಿದ್ದಾರೋ ಅಥವಾ ಬಸ್ ನಲ್ಲಿ ಕಳೆದುಕೊಂಡಿದ್ದಾರೋ ಎಂಬ ಬಗ್ಗೆ ನಮಗೆ ಸರಿಯಾದ ಮಾಹಿತಿಯಿಲ್ಲ, ಅಲ್ಲಿ ಯಾವುದೇ ಶಾಪ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ ಹೀಗಾಗಿ ಅಲ್ಲಿ ಯಾವುದೇ ಸುಳಿವು ಸಿಗಲಿಲ್ಲ, ಹೀಗಾಗಿ ಜನರು ಮಾರುಕಟ್ಟೆಗೆ ತೆರಳುವಾಗ ಚಿನ್ನ ಧರಿಸುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ  ಪದ್ಮಾವತಿ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.
SCROLL FOR NEXT